ದೇವರು

ಹಸಿದು ಬಂದಾಗ
ತುತ್ತು ಅನ್ನ ನೀಡಲಿಲ್ಲ.
ಬಾಯಾರಿ ಬಂದಾಗ
ಬೊಗಸೆ ನೀರು
ಕೊಡಲಿಲ್ಲ.

ನಿನ್ನಿಂದ ಹೇಗೆ ತಾನೇ ಸಾಧ್ಯ
ನೀನೊಂದು ಕಲ್ಲು.
ದೇವರೆಂದು ಹೆಸರಿಟ್ಟುಕೊಂಡಿರುವ
ನಿರ್ಜೀವ ಕಗ್ಗಲ್ಲು.

ಪಿ.ಡಿ. ಮಂಜು ಸಾಮ್ರಾಟ್

- Manjunath

18 Feb 2018, 04:51 pm
Download App from Playstore: