ಭಾರತ
ಓ ನನ್ನ ಭವ್ಯ ಭಾರತ ಎತ್ತ ನಿನ್ನ ಪಯಣ,
ಬೀಯರ್ ಬ್ರಾಂಡಿಗಳಿಗೆ ವೋಟು ಮಾರುವ ನಿನ್ನೀ ಜನ,
ಹಾಳು ಮಾಡಿಹರು ಸಹಸ್ರ ವರ್ಷಗಳ ನಿನ್ನ ಭವ್ಯ ಇತಿಹಾಸವನ್ನ,
ನಿನ್ನ ವಿನಾಷಕ್ಕೆ ದಿನೇ ದಿನೇ ಶ್ರಮಿಸುತ್ತಿದೆ ಭಾರತದ ರಾಜಕಾರಣ;
ಆ ದಿನ ಬ್ರಿಟಿಷ್, ಮೊಹಮ್ಮದರು ಕೊಳ್ಳೆ ಹೊಡೆದರು ನಿನ್ನ ಅಪಾರವಾದ ಸಂಪತ್ತನ್ನ,
ಇಂದಿನ ರಾಜಕಾರಣಿಗಳು ಭಗೆಯುತ್ತಿರುವರು ದೇಶವಾಸಿಗಳ ಒಡಲನ್ನ,
ಜಾತಿ ಜಾತಿಗಳ ನಡುವೆ ಧಂಗೆ ಎಬ್ಬಿಸಿ ವೋಟ್
ಬ್ಯಾಂಕ್ ಮಾಡಿ ಗೆಲ್ಲುವ ಜನಪ್ರತಿನಿಧಿಗಳೇ ಮರೆಯುತ್ತಿರುವರು ತಾವು ಗೆದ್ದ ಕಾರಣವನ್ನ;
ಎಲೆಕ್ಷನ್ ಬಂದಾಗ ಮಾತ್ರ ರೈತನೇ ದೇಶದ ಬೆನ್ನೆಲುಬೆಂದು ,ಆ ಬೆನ್ನೆಲುಬನ್ನು ಸವರಿ ಮತ ಪಡೆಯುವ ರಾಜಕಾರಣಿಗಳೇ
ಎಂದಾದರೂ ಅವನ ಕಷ್ಟಕ್ಕೆ ಪರಿಹಾರ ನೀಡಿದ್ದೀರಾ,
ಹೊರತು ಅವನ ಮೇಲೆ ಸಾಲದ ಹೊರೆ ಹೊರಿಸಿ ಸಾವಿನ ಮನೆಗೆ ನೂಕಿದ್ದೀರಿ.
ಹೀಗೆ ಮುಂದುವರೆದರೆ ಅನ್ನಕ್ಕೆ ಬರ ಬಂದು ಮನುಷ್ಯ ಮನುಷ್ಯನನ್ನು ತಿಂದು ಬದುಕಬೇಕಾದೀತು,
ಎಚ್ಚರ, ದೇಶದ ಯುವಕರೇ ಬದಲಾವಣೆಗೆ ಮುಂದಾಗಿ
ಭಾರತವನ್ನು ರಕ್ಷಿಸೋಣ...
- Vijaykiran NC
18 Mar 2018, 10:38 am
Download App from Playstore: