ಇದ್ದಿದ್ದೆ ದಿನ ಚಿಂತೆ
ಇದ್ದಿದ್ದೆ ದಿನ ಚಿಂತೆ
ಮಾಡು ನೀ ಹರುಷದ ಸಂತೆ..
ಬಂದಿದ್ದೆ ನಿನ್ನದಂತೆ
ಸಾಗು ನೀ ನಗುವಿನ ಜೊತೆ..
ಇದು ಮುಗಿಯದ ಕಥೆ
ಸೇರಿಸು ನಿನ್ನ ಸಾಹಸಗಾಥೆ.." ಪ "
ಈ ಬದುಕು ಒಂದು ಜಾತ್ರೆ
ಮಾರು ನೀ ಪ್ರೀತಿ ಸ್ನೇಹದ ಅಕ್ಷಯ ಪಾತ್ರೆ..
ನೂರು ವರ್ಷ ಸ್ವಾರ್ಥ ಸಾಮ್ರಾಜ್ಯ ಆಳಿದರೇನು
ಮೂರು ದಿನ ಸ್ನೇಹ ಸಾಗರ ಈಜಿದರೆ ಸಾಕು ನೀನು..
ಮಣ್ಣಿನೊಳಗೆ ಬರುವುದೇನು ನೋಟು
ಮನುಷನಿಗೆ ಇರಬೇಕು ಒಳ್ಳೆತನದ ನಂಟು..
ಹರುಷಕ್ಕೆ ದಾರಿ ಇದೆ ಇರುವ ಭಾಗ್ಯ ನೆನೆದರೆ
ನಿನಗೆ ಒಂದು ಹೆಸರಿದೆ ನಾಲ್ಕು ಜನರಿಗಾಗಿ ಬಾಳಿದರೆ..
ಏನು ನಷ್ಟ ಇಲ್ಲ ನೀ ಸತ್ತರೆ
ಏನು ಕಷ್ಟ ಆಗೋಲ್ಲ ನೀ ಧೈರ್ಯದಿ ಮುನ್ನಡೆದರೆ.
ಬಿರುಗಾಳಿ ಗುಡುಗು ಸಿಡಿಲು ಬಂದರೇನು
ಹಕ್ಕಿ ಗೂಡು ಕಟ್ಟಲು ಅಂಜುವುದೇನು..
ನೂರು ಸೋಲುಗಳು ಎದುರಾದರೇನು
ಗೆಲುವಿನ ಸಾಲಲಿ ನಿಲ್ಲುವೆ ಎನ್ನು..
ಅಪವಾದ ಅಪಮಾನ ಗೆದ್ದರೆ ನೀನು
ಈಜಗದ ದಂತಕಥೆ ಆಗುವೆ ನೀನು..
- ಸುರೇಶ್ ಟಿ ವಿ
22 Mar 2018, 08:41 pm
Download App from Playstore: