ತವಕ

ಎದೆಯಾಳದ ಕವಿತೆಯೊಂದು ಪುಟಿದೆದ್ದು ಮಾತನಾಡುತಿದೆ ಭಾವ ತುಂಬಿದ ಪದಗಳಲ್ಲಿ ಕಂಡ ಮನಮೋಹಕ ಮನಸೊಂದನು ಸೇರಲೆಂದು ತನ್ನ ಚೆಲುವಿನಿಂದ.

ಬಿಡಲಾರದೆ ಈ ಮನ ತಾನು ಮೆಚ್ಚಿದ ಕವನ, ನಿನ್ನೊಡನೆ ಕೂಡಿ ಕಳಿದ ಕ್ಷಣಗಳ ಛಾಯಾಚಿತ್ರಗಳನ್ನು ಹುಡುಕುತಿದೆ ನೀ ನಿಂತ ಕಣ್ಣಲ್ಲಿ ತಾ ಸೇರುವ ಮುನ್ನ ಕರುನಾಡ ಮಣ್ಣಲ್ಲಿ.

ಮುಂದೆಂದೋ ಬಾರದ ಸಾಲೊಂದು ನೆನ್ನೆಯ ಕನವರಿಕೆಯಲಿ ಕಂಡಂತೆ, ಕ್ಷಣಮಾತ್ರ ಮರೆಯಾದರೂನು ನಿನ್ನ ಹುಡುಕಿ ಬರುವಂತೆ ಬರುತಿದೆಯೇ ಪದಗಳಲ್ಲಿ ನೀನಾಗಿ.

ಸನಿಹ ಸುಳಿಯದ ಶಶಿಯ ಬಿಂಬ ನೋಡಲೆಂದು ಕಣ್ಣಲ್ಲಿ ಒಂದು ಪ್ರೀತಿಯ ಚಿಲುಮೆಯನ್ನೇ ಸೃಷ್ಟಿಸಿದೆ ಬಚ್ಚಿಡಲು ನಿನ್ನ ಪ್ರತಿಬಿಂಬವಾದರೂ ನನ್ನಲ್ಲಿ.

- ಚುಕ್ಕಿ

11 Apr 2018, 08:01 pm
Download App from Playstore: