ಯಾರಿಹರು ಈ ಮನಕೆ ಸೂತ್ರಧಾರಿ

ಎತ್ತ ನೋಡಿದರತ್ತ ಕೈಗೆ ನಿಲುಕದ
ಭಾವನೆಗಳ ಸರಮಾಲೆ ಮನದಲ್ಲಿ
ಏಕಾದರು ಇರುವುದೋ.. ಈ ಕೆಟ್ಟ ಮನಸ್ಸು
........ ಈ ದೇಹದಲ್ಲಿ

ಬೇಡವಾದ ಚಿಂತನೆಗಳ ಏಕೆ ನೆನಪಿಸಿ..
ಕೊಳ್ಳುವುದೋ ಮತ್ತೆ ಮತ್ತೆ
ನೋವು ತರಿಸಲೆಂದು ....
ಇನ್ನಷ್ಟು ದುಪ್ಪಟಗೊಳಿಸಲು ಈ
ಕಲಿಯುಗದ ಕಷ್ಟಗಳ ಪಯಣವ

ಕಣ್ಣಿಗೆ ಕಾಣಿಸುವುದೆಲ್ಲ ನಿಜವಲ್ಲ...
ಎಂದೆನಿಸುತಿಹದು ಈ ಮನಕೆ
ಆ ಹಿಂದಿನ ದಿನಗಳ ನೆನಪುಗಳು
ಇನ್ನು ಚುಚ್ಚುತಿಹದು ಇಟಿಯಂತೆ

ಅದೊಂದು ದಿನ ಅದೊಂದು ದಿನ
ಏಕಾದರು ಬಂತೋ ನನ್ನ ಜೀವನದಲ್ಲಿ
ಇಂದಿಗೂ ಅನುಭವಿಸುವಂತೆ ಮಾಡಿದೆ
.............. ಅದರ ಫಲವ

ನಾ.... ಏಕೆ ಮೊದಲಿನಂತಿಲ್ಲ
ಎಂಬ ಪ್ರಶ್ನೆ ಸದಾ ಮನಸ್ಸಿನಲ್ಲಿ
ಕೊರೆಯುತಿಹದು ಗುಂಗಿಯಂತೆ
ಮತ್ತೇ ಮತ್ತೆ ಬರಬಾರದೇಕೆ ಆ ಕಳೆದುಹೋದ
ಆ ಮಧುರ ದಿನಗಳ ಕ್ಷಣಗಳು

ಕಾಲ ಚಕ್ರ ತಿರುಗಬಾರದೇಕೆ ಹಿಂದಕ್ಕೆ
ನನ್ನಿ ಪರಿಯ ನೋವ ಕಣ್ಣಾರೆ ಕಂಡ್ಡಿದ್ದು.......



...... ಮಂಜು

- ಮಂಜು

10 Jun 2018, 09:22 pm
Download App from Playstore: