ವೇದನೆ
ಕಾರ್ಮುಗಿಲು ಕವಿದ ಮೋಡದ ಮರೆಯಲಿ
ನಿಂತಿರುವೇ ನೀನು ಭೂಮಿ ತಾಯಿ ಮಡಿಲಲಿ
ಹನಿಹನಿಯಾಗಿ ಸುರಿಸಿ ಭೂಮಿ ತಂಪಾಗಿಸದೆ
ಜೀವ ಜಲ ರಾಶಿಗೂ ಬಾಯಾರಿಕೆ ನೀಗಿಸದೆ
ಜೋರಾಗಿ ಅತ್ತು ಬಿಡು ನೀ ಒಮ್ಮೆಲೆ
ಗದ್ದೆ ತುಂಬ ಪೈರು ತುಂಬಿದ ತೆನೆಗಳು
ನಿತ್ಯ ದುಡಿಮೆಯ ಬಯಲಿನೆಡೆಗೆ
ಚಳಿಸಲಾಗದ ಕಾಲುಗಳು
ಬಿಸಿಲು ಬೇಗೆಗೆ ಬೆಂದು ಹೋಗಿ
ನಾಡಿ ಬಡಿತ ನಿಂತವು
ಮೊರೆ ಇಡುವೆನು ದೇವಾ ರೈತನು
ಅವನ ಕೂಗು ನಿನಗೆ ಕೇಳಿಸದೆ ???
- Prakash Angadi
13 Jun 2018, 05:45 pm
Download App from Playstore: