ಸಹಬಾಳ್ವೆ
ಒಟ್ಟಾಗಿ ಬಾಳುವ ಜೀವನ ನಡೆಸಿ
ಕೂಡಿ ಉಣ್ಣುವ ಜನರಿಂದಿಲ್ಲ
ಕೂಡಿ ದುಡಿಯುತ ಪೂರ್ವಜರು ಹೇಳಿದ
ದಿವ್ಯಮಂತ್ರ ಈಗಿಲ್ಲ
ಹತ್ತಿರವಿದ್ದರೂ,ಸನಿಹವಿದ್ದರೂ
ಸಂಬಂಧದ ಬೆಲೆ ತಿಳಿದಿಲ್ಲ
ಹೊಂದಿಕೆ ಎಂಬುವುದು ಉಳಿದಿಲ್ಲ
ಒತ್ತಡದ ಬದುಕಲಿ ಎಲ್ಲರೂ ಒಟ್ಟಿಗೆ
ಕೂಡಿ ಉಣ್ಣುವ ದಿನವಿಲ್ಲ
ಒಂದೇ ಸೂರಿನಡಿ
ಬದುಕುವ ದಿನಗಳು ನಮಗಿಲ್ಲ
ಉಣ್ಣುವ ಅಂಬಲಿ,,ಅನ್ನ ಸಾರಿನಲಿ
ಪ್ರೀತಿ ಪ್ರೇಮದ ರುಚಿಯಿಲ್ಲ
ನೋಡುವ ಕಣ್ಣಲ್ಲಿ ನೀಡುವ ಕೈಯಲ್ಲಿ
ನಂಬಿಕೆಯ ಹೊಂದಿಕೆಯಿಲ್ಲ
ಜೇನು,, ಗೆದ್ದಿಲು,,ಇರುವೆಗಳಂತೆ
ಬಾಳುವೆಯೆಂಬುವುದು ಕಲಿಲಿಲ್ಲ
ಶಾಂತಿ ಸಹನೆ ಮಂತ್ರದ ಮರೆತು
ಬದುಕಿನ ಬೆಲೆಯು ತಿಳಿದಿಲ್ಲ...
ಮಲ್ಲೇಶ ದಂಡಿನ,,ಹಾವೇರಿ
- Prakash Angadi
15 Jun 2018, 08:10 pm
Download App from Playstore: