ನಿರ್ಲಿಪ್ತತೆ..
ಎಲ್ಲ ಇದ್ದೂ ಏನೂ ಇಲ್ಲದ ಭಾವ..
ಮೆಲ್ಲ ಮೆಲ್ಲ ಒಳ ನುಸುಳಲು ಯತ್ನಿಸಿವೆ
ನಕಾರಾತ್ಮಕ ಚಿಂತನೆಗಳ ಹಾವ..
ತನು ಮನಗಳು ಬಯಸುತಿವೆ ಸನಿಹ ಬರಲೆಂದು ಸಾವ..
ಬೇಡವಾಗಿದೆ ಬದುಕು, ಕಾಡದಾಗಿವೆ ಕನಸು,
ಮರಗಟ್ಟಿದೆ ಮನಸ್ಸು, ವಿಕಾರವಾಗಿವೆ ವರ್ಚಸ್ಸು
ಏನ ಹೇಳಲಿ, ಯಾರ ಕೇಳಲಿ, ಎಲ್ಲಿ ಹುಡುಕಲಿ
ಪರದಾಡಿಹ ಮನಸ ಸರಿಪಡಿಸುವ ಉಪಾಯವ...
ಅತ್ತ ಇತ್ತ ಎತ್ತ ನೋಡಿದರೆನು,
ಕೂಗಿ ಕೂಗಿ ರೇಗಿ ಹೇಗಿ ಸತ್ತರೇನು
ಚಿತ್ತ ಸುತ್ತ ಸುಟ್ಟ ಸೂತಕದ ಛಾಯೆ..
ಮನವು ಮರುಗಿ, ಅಹಿಸಿ ಸಹಿಸಿ ಸಾಗಿದೆ..
ಅಂತ ಇಂತ ಎಂತ ಕಾಯ್ದರೇನು
ಯಾರು ಎಲ್ಲಿ ಬರುವರು
ಬಂದು ಇಂದು ಮನದ ಮುಸುಕ ತೆಗೆದರೆನು
ಬಾಳಿ ಬದುಕಿ ಹಸಿದು ಬಸಿದು ಮಾಡುವುದಾದರೆನು
ನೀನೆ ತಿರುಗಿ ಬಂದು ನನ್ನ ಬಾಳ್ಗೆ
ಒಲವ ಹೊಸೆದು
ಪ್ರೀತಿ ಬೆಸೆದು
ಮಾಡೆ ನನ್ನ ಬಾಳ ಏಳ್ಗೆ..
- Manju..
02 Jul 2018, 10:54 pm
Download App from Playstore: