ಮೈಸೂರು ನಮ್ಮೂರು
ಸಾಂಸ್ಕೃತಿಕ ನಗರ ಮೈಸೂರು
ಚಾಮುಂಡೇಶ್ವರಿಯ ತವರೂರು
ಮಹಿಷಾಸುರನ ಮರ್ದಿಸಿದಳು
ಬೆಟ್ಟದ ಮೇಲೆ ನೆಲೆಸಿದಳು
ನಾಡನು ಕಾಯುವ ಸಲುವಾಗಿ!
ಇದ್ದಕ್ಕಿದ್ದಂತೆ ಬೆಟ್ಟವನೇರುವ
ಬಯಕೆಯು ತುಂಬಿತು
ನನ್ನೀಮನವ
ಎಲ್ಲರ ಸಂಗಡ ನನ್ನ ಪಯಣ
ಸಾಗಿತು ನಾಲ್ಕುಚಕ್ರದ
ವಾಹನದಲಿ
ಬೆಟ್ಟದ ಬಳಿ ಬಳಿ ಸಾಗುತಲಿರಲು
ಬೆಟ್ಟವು ಕಂಡಿತು
ಗಗನದ ಅಂಗಳದ ಅಂಚಿನ
ಮೋಡದ ಮಡಿಲಿನಲಿ
ಮುಂಗಾರಿನ ಮಳೆರಾಯನು
ಮುತ್ತಿನ ಹನಿಗಳ
ಎಲ್ಲೆಡೆ ಚೆಲ್ಲುತಲಿರಲು
ಚುಮುಚುಮು ಚಳಿಯಲಿ
ಗಡಗಡ ನಡುಗುತ ಸಾಗಿದೆವು
ಅಮ್ಮನ ಸನ್ನಿದಿಯಲಿ
ಮೈಸೂರಿನ ಹಿರಮೆಯ ಸಾರುತ
ವರ್ತಕರ ಕಿಸೆಯನು ತುಂಬುತ
ಪ್ರವಾಸಿಗರ ಕಣ್ಣನು ತಣಿಸುತ
ಮೆರೆವಳು ತಾಯಿ ಚಾಮುಂಡಾಂಬೆ
ಶಾರಧ
- ಶಕುಂತಲಾ
11 Jul 2018, 04:22 pm
Download App from Playstore: