ಇದ್ದರೆಷ್ಟು ,ಬಿಟ್ಟರೆಷ್ಟು
ಪರರ ಕಷ್ಟವನರಿಯದವ
ದಿನಾ ದೇವರಿಗೆ ದೀಪ, ಕರ್ಪೂರವ
ಹಚ್ಚರೆಷ್ಟು ,ಬಿಟ್ಟರೆಷ್ಟು
ಊರ ಜನರ ಬದುಕು ಭಾವನೆಗಳ
ನೋವು, ನಲಿವುಗಳನ್ನರಿಯದವ
ಊರ ಮಂದಿರದ ಆಡಳಿತಾಧಿಕಾರಿ
ಆದರೆಷ್ಟು ,ಬಿಟ್ಟರೆಷ್ಟು
ದುಡಿಯುವ ಕಾರ್ಮಿಕರಿಗೆ
ಕನಿಷ್ಟ ಕೂಲಿಯ ನೀಡದ ಒಡೆಯ
ಊರಾಚೆಗಿನ ತಿರುಪತಿಗೆ
ಹಣ, ಬಂಗಾರ, ವೈಡೂರ್ಯವ
ಕೊಟ್ಟರೆಷ್ಟು , ಬಿಟ್ಟರೆಷ್ಟು
ದೀನ ದಲಿತರುಗಳ
ಹಿಂದುಳಿದ ವರ್ಗಗಳ
ಕಷ್ಟ ಕಾರ್ಪನ್ಯಗಳಿಗೆ
ಸ್ಪಂಧಿಸಲಾಗದ ಸರಕಾರ
ಇದ್ದರೆಷ್ಟು ,ಬಿಟ್ಟರೆಷ್ಟು.
ಸಂತೋಷ್ ಬಜಾಲ್
ಮಂಗಳೂರು
- santhoshbajal
02 Aug 2018, 03:14 pm
Download App from Playstore: