ಕುಂಬಾರ
ಕೇಸರಂಟಿದ ಕೈಗಳಲ್ಲಿ ಹಸ್ತರೇಖೆ ಕಾಣುತ್ತಿಲ್ಲ ಉಸಿರ ಬಿಸಿ ಒಣಗಿಸುವುದೇ ಈ ಮಡಿಕೆಯ ಒಡಲನ್ನು! ಎತ್ತಲಿಂದ ತಂದ ಮಣ್ಣೊ ಕಾಲಡಿಯಲಿ ಕರಗೋಗಿ ಚೂಪಾದ ಕಲ್ಲುಗಳ ತೆಗೆದೆಸೆದು ಮೃದುವಾಗಿ ತಿಳಿನೀರಲಿ ಮಿಂದೆದ್ದು ಗಾಲಿಮೇಲೆ ತಿರುಗುತಿಹುದು ಗಿರಗಿರನೆ ಜೋರಾಗಿ.
ಮಂಕಾದ ಕಣ್ಣೆರಡು ಆಯತಪ್ಪದೆ ಹಿಡಿದಿಟ್ಟು ಮೆಲ್ಲನೆ ಸಮಾಧಾನ ಪಡಿಸುತಿವೆ ನಾನಿರುವೆನು ನಿನಗಾಗಿ ನಿನ್ನ ಒಡಲ ಹೊಡೆಯಲು ಬಿಡನೆಂದು ನಾನೆಂದೂ.
ಜೇಡಿಮಣ್ಣ ಹೃದಯದಲ್ಲಿ ಮೂಡಿತೊಂದು ಮುದ್ದಾದ ಮಡಿಕೆ ಬೆಂಕಿಯಲಿ ಸುಟ್ಟು ಗಟ್ಟಿಗೊಂಡು ರಂಗು ಧರಿಸಿ ಕೆಂಪಗಾಗಿ.
ತಂಪಿನ ತವರೂರಿದು ಉದರದಲ್ಲಿನ ಬೇಗೆಯೆಲ್ಲವ ತಣ್ಣೀರ ತಂಪಲ್ಲೆ ಕಿತ್ತೆಸೆಯುವುದು.
- ಚುಕ್ಕಿ
05 Aug 2018, 06:38 pm
Download App from Playstore: