ಸಿಂಧೂರ ಸಿಂಗಾರಿ

ಗಲ್ಲಕೆ ಹಚ್ಚಿದ ಸಿರಿಗಂಧ ಬರಿದಾಗಿದೆ ಪರಿಪೂರ್ಣ ಕಲೆ ಇಲ್ಲದೆ, ಕೆಂದುಟಿಯು ಮಂಕಾಗಿದೆ ಮಾತನಾಡುವವರು ಜೊತೆಗಿಲ್ಲದೆ, ಮೂಗುತಿಯು ಮೌನವಾಗಿದೆ ಕಣ್ರೆಪ್ಪೆಯ ಗಲಭೆ ಇಲ್ಲದೆ ಹಣೆಯತ್ತ ನೋಡಿ, ಹುಬ್ಬೇರಡು ಚಡಪಡಿಸಿದೆ ಕುಂಕುಮದ ಸೊಬಗಿಲ್ಲದೆ.

ಉಂಗುರದ ಬೆರಳ ತುದಿಯಲ್ಲಿ ಹುಬ್ಬೇರಡಿನ ನಡುವಲ್ಲಿ ಹಚ್ಚಲೇನೆ ಸಿಂಧೂರವ ಸಿಂಗಾರಿ ತುಂಬಲಿಂದು ನಿನ್ನಲ್ಲಿ ಸೌಭಾಗ್ಯದ ಸೊಬಗನ್ನು.

ಹಚ್ಚ ಹಸಿರ ಬಳೆಗಳ ತೊಡಿಸಿ ಜಾಜಿಮಲ್ಲಿಗೆ ಜಡೆಯಲಿ ಮುಡಿಸಿ ಝರಿಹಂಚು ಸೀರೆಯುಡಿಸಿ ಬೆಳ್ಳಿ ಕಾಲ್ಗೆಜ್ಜೆ ತೋಡಿಸಲೇನೆ ನಿನ್ನ ಪಾದವ ಅಂಗೈಯಲ್ಲಿರಿಸಿ.

ನಯವಾದ ಅಂಗೈಯಲ್ಲಿ ಮದರಂಗಿಯ ಹರಡಲೇ ,ನುಣುಪಾದ ಉಗುರುಗಳಿಗೆ ನೂರು ಬಣ್ಣ ಸೇರಿಸಿ ನಿನ್ನ ನಗೆಯ ಹಚ್ಚಲೇ,
ನಿನ್ನ ಕೆನ್ನೆ ಮೇಲೆ ಜಾರಿದ ಹನಿಯ ಬೊಗಸೆಯಲ್ಲಿ ಹಿಡಿಯಲೇನೆ ಮನದ ಬೇಗುದಿಯ ಅದರ ತಂಪಲ್ಲಿ ಮರೆಮಾಚಲು.
ಇಂದೊಂದು ದಿನ ನಿನ್ನ ಕದ್ದು ನನ್ನಲ್ಲಿ ಬಚ್ಚಿಟ್ಟು ಮುದ್ದಾಡಲು.

- ಚುಕ್ಕಿ

06 Aug 2018, 09:03 pm
Download App from Playstore: