ಧರ್ಮ ರಾಜಕಾರಣ
ಹುಟ್ಟುವಾಗ ಹಾಕಿಲ್ಲ ಅರ್ಜಿ
ಯಾವ ಧರ್ಮದೊಳಗೆ ಪ್ರವೇಶ ಮಾಡಲಿ ನಾ
ಕಿವಿಯಲ್ಲಿ ಕೇಳುತ್ತಾ ಬಂದೆ
ಮಂದಿರ ಮಸೀದಿಗಳ ಸಂದೇಶ ದಿನಾ
ಅನ್ಯ ಧರ್ಮವ ಗೌರವಿಸಲು
ತಾಯಿ ಕೊಟ್ಟಲು ಮಾರ್ಗದರ್ಶನ ಸದಾ
ಧರ್ಮ ರಕ್ಷಣೆಯ ಹೆಸರಲ್ಲಿ
ಗುತ್ತಿಗೆ ಪಡೆದು ಮಾಡಿದರವರು ಧರ್ಮರಾಜಕಾರಣ
ಧರ್ಮ ಧರ್ಮಗಳ ನಡುವೆ
ಬೆಂಕಿ ಉಗುಳಿದರು ಕ್ಷಣ ಕ್ಷಣ
ತಲವಾರು ಕಾಳಗಕ್ಕೆ ಛೂ ಬಿಟ್ಟರು
ಯುವಕರ ಪ್ರತಿ ದಿನ ದಿನ
ರಕ್ತದೋಕುಳಿ ಹರಿದು
ನಗರದಲ್ಲಾಯಿತು ನರಕದರ್ಶನ
ಪ್ರಾಣ ಕಳಕೊಂಡ ಯುವಕರ ತಾಯಿಯ
ಮುಖದಲ್ಲರಿಯಿತು ಕಣ್ಣೀರಿನ ಹನಿಕಂಪನ
ಧರ್ಮರಾಜಕಾರಣದ ನಾಯಕರಿಗೆ
ದೊರಕಿತು ಸ್ವರ್ಗದ ಹಾದಿಯ ಪ್ರದರ್ಶನ
ಹಿಂದುಳಿದ ಯುವಕರಿಗೆ
ಕೊನೆಗೆ ಜೈಲೇ ದರ್ಶನ
ಸಂತೋಷ್ ಬಜಾಲ್
ಮಂಗಳೂರು
- santhoshbajal
09 Aug 2018, 12:12 pm
Download App from Playstore: