ಯೋಧ

ಕೈಯಲ್ಲೊಂದು ಬಂದೂಕಿದೆ.. ಎದೆಯಲ್ಲೊಂದು ನೋವು ಇದೆ..
ಬೆನ್ನ ಹಿಂದೆ ಸಾವು ಇದೆ.. ಕಣ್ಣ ಮುಂದೆ ಗುರಿಯಿದೆ..
ಕೊರೆಯೋ ಚಳಿಯೇ ಇರಲಿ.. ಸುಡುವ ಬಿಸಿಲೇ ಬರಲಿ..
ಕ್ಷಣ ಕ್ಷಣವೂ ಹೋರಾಡುತಿರುವೆ.. ಅದೇನೆ ಆಗಲಿ..

ಹೆತ್ತವರ ಅಲ್ಲೇ ತೊರೆದು.. ಮರೆತೇ ಬಿಟ್ಟು ನಿನ್ನ ಒಲವ..
ಕಾಯುತಿರುವೆ ನೀನು ಇಂದು.. ಕೋಟಿ ಜನರ ಪ್ರಾಣವ..
ಆಸೆಯಿರದ ನಿನ್ನ ಬದುಕ್ಕೊಂದು ಸಾವಿಲ್ಲದ ತ್ಯಾಗಚರಿತೆ..
ದೇಶದ ಶಾಂತಿಯು ನೀ ರಚಿಸಿದ ನೆತ್ತರ ಕ್ರಾಂತಿಕವಿತೆ..

ಕಣ್ಣಲ್ಲೆರಡು ಹನಿ ಸುರಿಸಲಾರೆವು ನಾವು..
ದೇಶಕ್ಕೋಸ್ಕರ ರಕ್ತ ಸುರಿಸಿ ಮಡಿವಿರಿ ನೀವು..
ಸಾವಿನ ಸುದ್ದಿ ಮನೆಯವರಿಗೆ ತಲುಪಿದರೇ..
ಆಗುವ ದುಃಖಕೆ ಹೊಣೆ ಖಂಡಿತ ಆ ದೇವರೇ..

ಭಯವನು ಮರೆತು ಜಯ ಸಾಧಿಸೋ ಸೈನಿಕ..
ಇವರಿಗೆ ಗೌರವ ಸಲ್ಲಿಸೋದು ನಮ್ಮ ಕಾಯಕ..
ಜಾತಿ ಭೇದ ತೊರೆದು ತೋರಬೇಕು ನಮ್ಮ ಬಂಧ..
ಆಗಬೇಕು ಪ್ರತಿಯೊಬ್ಬ ಪ್ರಜೆಯೂ ದೇಶಕಾಯೋ ಯೋಧ..

- sandesh

14 Aug 2018, 10:37 pm
Download App from Playstore: