ಜಳಪ್ರಳಯ

ಜಾತಿ ಧರ್ಮ ಮತವೆಂಬ ಭೇದದಲಿ
ಮುಳುಗಿದ್ದ ಸಮಾಜವು
ಇಂದು ಬೇಡುತ್ತಿದೆ ಸಿಕ್ಕರೆ ಸಾಕು ಅನ್ನ ನೀರು
ಬದುಕಬೇಕೆಂಬ ಆಸೆಯಲಿ

ಹೊಡೆದಾಡಿದರು ಅಂದು
ಇದೇ ಜಾತಿ ಧರ್ಮದ ಕಲಹಕ್ಕೆ
ಕ್ಷಣ ಮಾತ್ರದಿ ಕೊಳಚೆಯಾಗಿತ್ತು ಬದುಕು,
ಮನುಷ್ಯ ಜಗತ್ತಿನಲ್ಲಿ ಶೂನ್ಯ ಎಂದು ಸಾರಿತು

ಭೇದಭಾವ ಮಾಡಿ ಬದುಕಿದವರೂ ಉಳಿಯಲಿಲ್ಲ ಐಷರಾಮಿ ಬದುಕನ್ನು ಬಂಗಾರವಾಗಿಸಲಿಲ್ಲ
ಬರಡಾಯಿತು ಬದುಕು
ಒಂದೇ ಕ್ಷಣಮಾತ್ರದಿ ಪ್ರಕೃತಿ ಮುನಿಸಿಗೆ

- ಎಸ್.ಬಿ

19 Aug 2018, 02:00 pm
Download App from Playstore: