ನಮ್ಮ ಬಾಷೆ
ಕನ್ನಡನಾಡಲಿ ಜನಿಸಿದ ನಾವು
ಕನ್ನಡವನ್ನೆ ಮರೆತಿಹೆವು
ಅಂಕಲ್, ಮಮ್ಮಿ,ಡ್ಯಾಡಿ ಎನ್ನುವ
ಆಂಗ್ಲ ಭಾಷೆಯ ಬಳಸುವೆವು
ಈ ಪರಿ ಉಳಿದರೆ ಎಂದೂ
ಕನ್ನಡ ತಾಯಿಗೆ ಉಳಿವಿಲ್ಲ
ಪರ ಭಾಷೆಯು ನಮ್ಮಲ್ಲಿದ್ದರೆ
ಕನ್ನಾಡಾಂಬೆಯು ಮರುಗುವಳು
ಬನ್ನಿರಿ ಚಿಣ್ಣರೆ ಮಕ್ಕಳೆ ನಾವು
ನವ ಕರ್ನಾಟಕ ರಚಿಸೋಣ
ಇಂದಿನ ಮಕ್ಕಳ ಮನದಲಿ ನಾವು
ಕನ್ನಡ ಕಂಪನು ಹರಡೋಣ
ಕುವೆಂಪು , ಬೇಂದ್ರೆ ನಡೆದ ನಡತೆಯ
ಜೀವನದಲ್ಲುಪಯೋಗಿಸುವ
ಕನ್ನಡ ನಾಡಲಿ ಜನಿಸಿದ ನಾವು
ಮಾತೆಯ ಋಣವ ತೀರಿಸುವ
(ರಾಗ ಲಾವಣಿ)
ಕುಂತೂರು ತ ಸುಬ್ರಮಣ್ಯ
9482119447
- KT Subramanya
10 Sep 2018, 10:47 am
Download App from Playstore: