ನಮ್ಮ ಬಾಷೆ

ಕನ್ನಡನಾಡಲಿ ಜನಿಸಿದ ನಾವು
ಕನ್ನಡವನ್ನೆ ಮರೆತಿಹೆವು
ಅಂಕಲ್, ಮಮ್ಮಿ,ಡ್ಯಾಡಿ ಎನ್ನುವ
ಆಂಗ್ಲ ಭಾಷೆಯ ಬಳಸುವೆವು

ಈ ಪರಿ ಉಳಿದರೆ ಎಂದೂ
ಕನ್ನಡ ತಾಯಿಗೆ ಉಳಿವಿಲ್ಲ
ಪರ ಭಾಷೆಯು ನಮ್ಮಲ್ಲಿದ್ದರೆ
ಕನ್ನಾಡಾಂಬೆಯು ಮರುಗುವಳು

ಬನ್ನಿರಿ ಚಿಣ್ಣರೆ ಮಕ್ಕಳೆ ನಾವು
ನವ ಕರ್ನಾಟಕ ರಚಿಸೋಣ
ಇಂದಿನ ಮಕ್ಕಳ ಮನದಲಿ ನಾವು
ಕನ್ನಡ ಕಂಪನು ಹರಡೋಣ

ಕುವೆಂಪು , ಬೇಂದ್ರೆ ನಡೆದ ನಡತೆಯ
ಜೀವನದಲ್ಲುಪಯೋಗಿಸುವ
ಕನ್ನಡ ನಾಡಲಿ ಜನಿಸಿದ ನಾವು
ಮಾತೆಯ ಋಣವ ತೀರಿಸುವ

(ರಾಗ ಲಾವಣಿ)

ಕುಂತೂರು ತ ಸುಬ್ರಮಣ್ಯ
9482119447

- KT Subramanya

10 Sep 2018, 10:47 am
Download App from Playstore: