ಮಳೆರಾಯ


ಜವರಾಯನ ಆರ್ಭಟಕ್ಕೆ
ಹಸಿರು ಜರತಾರಿ ಸೀರೆಯುಟ್ಟ ಭೂತಾಯಿ ,
ಕುಸಿದು ಕುಳಿತಿಹಳು .
ಅಲ್ಲಲ್ಲಿ ಭೋರ್ಗರೆದು ಝರಿಯಾಗಿ ಹರಿಯುತಿದೆ
ಮಳೆ ಹನಿಯು ,
ಅದರ ನಡುವಿನಲಿ
ಪ್ರಕೃತಿಯು ಝಗಮಗಿಸುತಾ ತಂಪನ್ನೆರೆಯುತಿದೆ ಈ ಸುಂದರ ಕ್ಷಣಗಳಲ್ಲಿ.
ನನ್ನ ಕಷ್ಟ-ಕಾರ್ಪಣ್ಯಗಳು ಸವಿಯುತಿದೆ ,
ಪ್ರಕೃತಿಯ ಜೊತೆಗೂಡಿ.
ಮನಮೋಹಕ ದೃಶ್ಯಗಳ ಬಗ್ಗೆ ಮನದಲ್ಲಿ ಹಾಡಿ
ಸದಾ ಹಸಿರು
ಪ್ರಕೃತಿಯೇ ನನ್ನ ಉಸಿರು .

( ನಿಮ್ಮ ಪ್ರೀತಿಯ ಜೀತು )

- ಸಂತೋಷ್//ಜೀತು

28 Sep 2018, 11:24 am
Download App from Playstore: