ಎಲೆ ಮನವೇ..!

ಎಲೆ ಮನವೇ ನೀ
ಏಕೆ ಪರದಾಡುವೆ!
ಒಂದಿಷ್ಟು ದಿನ ಬಾಳಲು
ಪರರನ್ನೇಕೆ ತುಳಿಯುವೆ ?
ಹೆಮ್ಮರವಾಗಿ ಬೆಳೆದ
ವೃಕ್ಷದ ಎಲೆಗಳು
ಉದುರಿದರಲ್ಲವೇ
ಅದರ ಬೆಳವಣಿಗೆ.
ಹುಟ್ಟಿರುವ ರವಿ
ಮುಳುಗಿದರಲ್ಲವೇ
ತೆಂಗದಿರನ ಆಗಮನ
ಮರುದಿನ ಮತ್ತೆ ಚೇತನ.
ಹುಚ್ಚನಾಗಿ ಬದುಕದಿರು
ಅಚ್ಚನ್ನೊಂದ ಅಳಿಸದಿರು
ಮಚ್ಚಿನೊಂದಿಗೆ ಆಡುವ
ನೀಚ ಬುದ್ದಿಯ ಬೆಳೆಸದಿರು
ಹುಲಿಯೆಂದು ಭಾವಿಸಿದರೆ
ಕೊನೆಗೆ ಹುಲ್ಲು ತಿನ್ನುವೆ
ಕಲಿಯುಗದ ಕೊನೆಯಲಿ
ನಿನಗೆ ನೀನೆ ಬಲಿಯಾಗುವೆ.!

- vasu

06 Oct 2018, 10:33 pm
Download App from Playstore: