ಮೋಸ

ಕೆಲಸದ ಸ್ಥಳದಲ್ಲಿ ಒತ್ತಡ ಹಾಕುವ ವೇಷ..
ಬೆನ್ನ-ಹಿಂದೆ ಯಾಕೆ ಮಾಡ್ತಾರೆ ಇಂತ ದ್ವೇಷ..
ಹೊಟ್ಟೆ ಹೊಡೆಯೋಕ್ಕಿಳಿದಿದೆ ಈ ಆಳಾದ ರೋಷ..
ತಲೆ-ತಲಾಂತರದಿಂದ ಇದೆ ಅಲ್ಲವೇ ಮೀನಾ-ಮೇಷ.

ವೇಷದ-ಮೋಸಕೆ ಶ್ರೀ ರಾಮನೇ ವನವಾಸಕ್ಕಿಳಿದ!
ದ್ವೇಷದ-ಮೋಸಕೆ ಬಸವಣ್ಣನೆ ಬಸವಳಿದ!!
ರೋಷದ-ಮೋಸಕೆ ರಾಯಣ್ಣನೆ ನೇಣಿಗೇರಿದ!!!
ಮೇಷದ-ಮೊಸಕೆ ಭಗತ್ ಸಿಂಗನೇ ಹುತಾತ್ಮನಾದ!!!!

ನೆನಪಿಟಕಳ್ಳಿ ಬಸವಳಿದವನೆ ವಿಶ್ವಗುರುನಾದ...
ಬರೆದಿಟಕಳ್ಳಿ ವನವಾಸಕ್ಕಿಳಿದವನೆ ಆರಾಧ್ಯ ದೈವನಾದ..
ಗಮನಕ್ಕಿರಲಿ ನೇಣಿಗೇರಿದವನೆ ಮನ-ಮನೆ-ಮಾತಾದ..
ತಿಳಿದಿರಲಿ ಹುತಾತ್ಮನಾದವನೆ ಚಿಲುಮೆಯ ಸ್ಫೂರ್ತಿಯಾದ..
ಸುಗ್ಗಿ..

- ಆರ್ ಎಸ್ ಸುಗ್ಗಿ.

14 Oct 2018, 09:46 pm
Download App from Playstore: