ನೋವನು ಮರೆ
ನಿನ್ನ ದುಃಖ ದುಮ್ಮಾನಗಳ ಮೂಟೆ ಕಟ್ಟಿ
ಕತ್ತಲ ಕೋಣೆಯಲಿಟ್ಟು ಹೊರಡು ಗೆಳತಿ
ಹೊಸ ದಿನವು ನಿನಗಾಗಿ ಈ ಭುವಿಗೆ ಬಂದಿದೆ..
ನೋಡಲ್ಲಿ ಆ ರವಿಯು ಬೆಳಕ ಬಲೆಯನ್ನು ಹರಡಿ
ಭುವಿಯನ್ನೆಲ್ಲ ಸೆರೆ ಹಿಡಿಯುತಲಿಹನು,
ಬೊಗಸೆ ಖುಷಿಯನ್ನು ಮೊಗೆದು
ನಗುತ ಈ ದಿನವ ಕಳೆಯೋಣ,
ಕಟ್ಟಿಟ್ಟ ಕಷ್ಟದ ಬುತ್ತಿಯನು
ಹಸಿವಲ್ಲಿದ್ದರೂ ಮರೆಯೋಣ..
- ಶ್ರೀಗೋ.
29 Oct 2018, 06:14 am
Download App from Playstore: