ಕನ್ನಡದ ಕೂಳಲು
ನಾ ತಂದೆ ನಿನಗೆಂದೆ ಚಂದನದ ಕೊಳಲು
ತುಂಬದರ ಒಳಗೆಲ್ಲ ಕನ್ನಡದ ಉಸಿರು
ಮೈದುಂಬಿಕೊ ಕನ್ನಡವ ಕರುನಾಡಿನಿಂದ
ಅದನ್ನೆಲ್ಲ ನೀನೂದಿ ಕವಿಯಾಗೊ ಕಂದ
ಅಡಿಗಡಿಗೂ ಹೊಮ್ಮುತ ಕನ್ನಡದ ಹೊನಲು
ಘಜಿ೯ಸಲಿ ಕವಿವಾಣಿ ನೀನೂದುತಿರಲು
ಸಪ್ತಸ್ವರಗಳಲಿ ಝೇಂಕರಿಸಿ ಮಧುರ ತರಂಗ
ಸ್ವಾಭಿಮಾನದಲಿ ನೀನೂದು ಕೊಳಲಂತರಂಗ
ಕರುನಾಡ ನರನಾಡಿ ಕೇಳಿ ಕಲರವಕೆ
ಕಂಪಿಸಲು ನೀನೂದು ಕೊಳಲ ಕಣ ಕಣಕೆ
ಬಾನಂಗಳದಿ ಪ್ರತಿಧ್ವನಿಸಿ ವೈಭವದ ಕಂಪು
ನೀನೂದುತಿರೆ ನಭದ ಮೈ ಹಳದಿ ಕೆಂಪು
ಸುಧೆಯಂತ ಸದ್ದಿನಲ್ಲಿ ಕರುನಾಡ ಬೆಳಗು
ಸರ್ವಸ್ವವನ್ನೇ ಊದಿ ಕೊಳಲೊಳಗೆ ಮೊಳಗು
ನಿಲ್ಲಿಸದಿರು ಕಂದ ಕನ್ನಡ ಗೆಲ್ಲುವವರೆಗು
ನೀನುಡಿಸು ನಿನ್ನುಸಿರು ನಿಲ್ಲುವವರೆಗು..
※ ಕವಿ ಶ್ರೀವತ್ಸ ※
- ಶ್ರೀವತ್ಸ
02 Nov 2018, 11:27 pm
Download App from Playstore: