ಓ ವಿಧಿಯೇ
ಬಾಯಾರಿ ನಾ ಬಳಲಿ
ನೀರಿನ ಬಳಿ ಹೋದೆ
ಬಿಸಿಲು ಕುದುರೆಯೇ
ನೀ ನೀರ ಮರೆಸಿದೆಯೇ!!
ದಣಿದಿರುವ ಈ ತನುವು
ನೆರಳ ಬಯಸಿದರಿಲ್ಲಿ
ಮರವಿಲ್ಲ ಸೂರಿಲ್ಲ
ನೆರಳಿಗೂ ಬಂತು ಬರವು!!
ಹಸಿದಿರಲು ನಾ ಬಹಳ
ತುತ್ತು ನೀಡುವರಿಲ್ಲ
ಹಣ್ಣಿಲ್ಲ ಕಾಯಿಲ್ಲ
ಹಸಿವಿಗೂ ಸಿರಿತನವು!!
ಗೆಳೆತನಕೂ ಯಾರಿಲ್ಲ
ಒಡೆತನಕೂ ಯಾರಿಲ್ಲ
ಬಂಧ ಬಯಸಿದರಿಲ್ಲ
ಅಂಧು ಬಂಧುಗಳೇ ಇಲ್ಲ!!
ಅಳಬೇಕು ಎಂದೆನಗೆ
ಅನಿಸಿದರೂ ಅಳದಾದೆ
ಕಣ್ಣ ನೀರದು ಬತ್ತಿ
ಅಳದಾದೆನು ಓ ವಿಧಿಯೇ!!
- ಪಿ.ಜಿ.ಜ್ಯೋತಿ
05 Dec 2018, 11:14 am
Download App from Playstore: