ನಾ ಕೈಗೊಂಡ ಪ್ರವಾಸ
ನಾ ಕಂಡ ನಾಡು
ಸಕ್ಕರೆಯ ಬೀಡು
ಕಲ್ಪನೆಯ ಕಡಲು
ಕಾವೇರಿ ತಾಯಿಯ ಮಡಿಲು
ವನದೇವತೆ,ಜಲದೇವತೆಯ
ಸಂಗಮ ಈ ಬಯಲು
ಭರಚುಕ್ಕಿ ,ಗಗನಚುಕ್ಕಿಯು
ಬರಿಸಿತು ನಮಗೆಲ್ಲ ಅಮಲು
ತಲಕಾಡಿನೆಡೆಗೆ ನಮ್ಮೆಲ್ಲರ ಓಟ
ಮರಳಿನೊಂದಿಗಿನ ಸೆಣಸಾಟ
ಪಂಚಲಿಂಗಗಳ ದರ್ಶನದ ಆಟ
ಮರೆಯಾಯಿತು ಅರ್ಕೆಶ್ವರನ ನೋಟ
ಕಷ್ಣರಾಜ ಒಡೆಯರ ಕೊಡುಗೆ
ಕಾವೇರಿ ಉಳಿದಳು ಕರುನಾಡಿಗೆ
ವಿಶ್ವೆಶ್ವರಯ್ಯನವರ ಜಾಣ್ಮೆಗೆ
ನವ ವಿಜ್ಞಾನಿಗಳ ಮೆರವಣಿಗೆ
ಹಸಿರು ಮಡಿಲಲ್ಲಿ
ಮುಡುಕುತೊರೆಯಲ್ಲಿ
ಕೊರಕಲಲ್ಲಿ ಸಾಗಿ
ಗಿರಿಗಳಲ್ಲಿ ಬಾಗಿ
ಕೊಳಕ ತೊಳೆಯುತಿಹಳು
ತ್ಯಾಗಮಯಿ ಕಾವೇರಿತಾಯಿ
ಸಾಂಸ್ಕ್ರತ ನಗರಿಯ ರಾಣಿ
ಮಹಿಷಾಸುರನ ಸಂಹಾರಿಣಿ
ಅರಮನೆಗೆ ನಮ್ಮ ಬೇಟಿ
ಮೃಗಾಲಯವ ದಾಟಿ
ರಸ್ತೆಯ ಇಕ್ಕೆಲಗಳಲ್ಲಿ
ಹಸುರಿನ ಮೆರವಣಿಗೆಯಲ್ಲಿ
ಸಾಗಿದೆವು ಶ್ರೀರಂಗಪಟ್ಟಣದೆಡೆಗೆ
ಶ್ರೀರಂಗ, ನಿಮಿಷಾಂಬನ ದರ್ಶನಕೆ
ಸಂಭ್ರಮದ ವಾತಾವರಣ
ನೀಡಿದ ಕಾಲನು ಆಮಂತ್ರಣ
ಅಂದು ಸಕ್ಕರೆ ನಾಡಿಗೆ
ಯಮರಾಜನ ನಡಿಗೆ
ಮುವತ್ತು ಮಂದಿಯ ಮರಣ
ಹೃತಾತ್ಮರ ಕೂಡಿತು ಅಂಬಿಯ ಪ್ರಾಣ
ದು:ಖ ಮಡುಗಟ್ಟಿತು ಎಲ್ಲೆಲ್ಲು
ಹನಿಗಟ್ಟಿತು ಎಲ್ಲರ ಕಣ್ಣಲ್ಲು
ಜಗ್ಗದ-ಕುಗ್ಗದ ಸರದಾರ
ಮರಳಿ ಬಾ ಹಮ್ಮೀರ
ಶಾರಧ
- ಶಕುಂತಲಾ
06 Dec 2018, 06:46 pm
Download App from Playstore: