ಸಂಕ್ರಾಂತಿ
ಉದಯ ಪಥ ಬದಲಿಸುವ ದಿನ
ಸಡಗರ- ಸಂಭ್ರಮದ ಕ್ಷಣ
ದನ-ಕರುಗಳೆಲ್ಲ ಹಿಗ್ಗಿ
ತಂದಿವೆ ನಮಗೆಲ್ಲ ಸುಗ್ಗಿ
ಅಂಗಳವ ಸಾರಿಸೋಣ
ತೋರಣವ ಕಟ್ಟೋಣ
ಗೋವುಗಳ ಸಿಂಗರಿಸೋಣ
ಅಗ್ನಿ ಸ್ಪರ್ಶ ಮಾಡಿಸೋಣ
ರಾಸುಗಳಿಗೆ ಈ ಹಬ್ಬ
ರಾಶಿಗಳ ಕಟ್ಟುವ ಹಬ್ಬ
ಬನ್ನಿ ಎಳ್ಳು-ಬೆಲ್ಲ ಮೆಲ್ಲುವ
ಕಬ್ಬಿನ ಜಳವೆ ಸವಿಯುವ
ಎಲ್ಲಾ ಕೂಡಿ ನಲಿಯುವ
ರೈತನೇ ಅನ್ನದ ಮೂಲ
ಗೋವುಗಳೆ ಅವನಿಗೆ ಬಲ
ಅವುಗಳಿಗೆ ವರುಷಕೊಂದೆ ಹಬ್ಬ
ಇದು ನಮ್ಮ ಸಂಸ್ಕ್ರತಿಯ ಪ್ರತಿಬಿಂಬ
ಶಾರದ
- ಶಕುಂತಲಾ
15 Jan 2019, 10:29 am
Download App from Playstore: