ಭಾರತಾಂಬೆಯ ಪುತ್ರರಿವರು

ಎದೆಗೆ ಎದೆಯೊಡ್ಡಿ
ವೈರಿಯ ರಕ್ತವ ಕುಡಿದ,
ಭಾರತಾಂಬೆಯ ಹೆಮ್ಮೆಯ
ಪುತ್ರರು ನಮ್ಮ ಸೈನಿಕರು.
ಕಾಶ್ಮೀರದ ಕಾದಾಟದಲ್ಲಿ
ಪ್ರಾಣ ಬಿಟ್ಟರು ನೆಲ ಬಿಡೇವು.
ಗುಂಡಿಗೆಯ ಗೂಡಿನಲ್ಲಿ
ಭಾರತಮಾತೆಯ ಸ್ಮರಿಸುವರು.
ಲೆಕ್ಕಕ್ಕೆ ಲೆಕ್ಕ ಚುಕ್ತಾ ಮಾಡಿ
ವೈರಿಯ ರುಂಡ ಚಂಡಾಡಿ,
ಉತ್ತರಕ್ಕೆ ಉತ್ತರವನಿಟ್ಟು
ಆರ್ಭಟಿಸುವ ನಮ್ಮ ಯೋಧರು.
ಪ್ರೀತಿಯಿಂದ ಬಂದರೆ
ಪ್ರಾಣ ಕೊಡುವರು.
ಬಂದು ನಕರಾ ಮಾಡಿದರೆ
ನಿಂಪ್ರಾಣನ ತುತ್ತಾಗಿ ಉಣ್ಣುವರು.
ಎರೆಡು ಕೆನ್ನಗೆ ಹೊಡಿಸಿಕೊಳ್ಳಲು
ಇದು ಗಾಂಧಿ ಕಾಲವೇನಲ್ಲ.
ಪ್ರಾಣಕ್ಕೆ ಲೆಕ್ಕ ಪ್ರಾಣವೇ ಬೇಕೆನ್ನುವ
ಕ್ರಾಂತಿಕಾರಿ ಪಡೆಯಂತೆ ನಮ್ಮ ಸೈನಿಕರು.

- ನಾಗರಾಜ ಬಾಕೆ೯ರ್

15 Feb 2019, 08:51 am
Download App from Playstore: