ಕಾಳ್ಗಿಚ್ಚು ನಂದಿಸಿ ಜೀವಜಂತುಗಳ ಉಳಿಸಿ
ಬಾನಾಡಿಗಳು ನಾಡಿಗೆ ಬರಲು
ಬಿಡನು ಸುಮ್ಮನೆ ಬಾಳಲು...
ಜೀವಜಂತುಗಳು ಆಡವಿಯ ಮಡಿಲಲ್ಲಿರಲು
ಬಿಟ್ಟನು ಧಗಧಗನೇ ಹೊತ್ತಿ ಉರಿಯಲು..
ರೋಧಿಸಲು ಉಸಿರಿಲ್ಲ
ರಕ್ಷಿಸಲು ಯಾರಿಲ್ಲ....
ತನ್ನ ಬೆಳೆ ಬೇಯಿಸಿ ಕೊಳ್ಳಲು
ಬನವ ಮಾಡಿಕೊಂಡ ಉರುವಲು...
ತನ್ನ ದುರಾಸೆಯ ಕೋಟೆ ಕಟ್ಟಲು
ವನವ ಮಾಡಿದ ಬಟಾಬಯಲು..
ಇವನ ಆಸೆಗೆ ಕೊನೆಯಿಲ್ಲ
ಪರಿಸರ ರಕ್ಷಣೆ ಬೇಕಿಲ್ಲ....
ಗಂಟೆಗಟ್ಟಲೇ ಭಾಷಣ ಬಿಗಿದರೆ
ನಿಸರ್ಗ ಬೆಳೆವುದೇ?
ಮಾತಿನಲ್ಲಷ್ಟೇ ಕಾಳಜಿ ಮೆರೆದರೆ
ಪ್ರಕೃತಿ ಉಳಿವುದೇ?
ದಯೆಯಿರಲಿ ಎಂದು ಘೋಷಣೆ ಕೂಗಿದರೆ
ವನ್ಯಮೃಗಗಳು ಬದುಕುತ್ತವೆಯೇ?
ಇವನ ಹೊಟ್ಟೆಕಿಚ್ಚು ಸಾಯಲಿಲ್ಲ
ಕಾಳ್ಗಿಚ್ಚು ಆರಲಿಲ್ಲ...
ಕಾಡು ಹೊತ್ತಿ ಉರಿದರೆ
ನಾಡು ಸುಡುಗಾಡು...
ಕಾನನ ಬರಿದಾದರೆ
ಜೀವನ ನಶ್ವರ....
ಸಸ್ಯಸಂಕುಲ ಸೆಲೆ ರಕ್ಷಿಸಿದರೆ
ಜೀವಸಂಕುಲಕ್ಕೆ ನೆಲೆ...
ಪರಿಸರ ಬೆಳೆಸಿದರೆ
ಸಂಸಾರ ಬಂಗಾರ....
- ಸುರೇಶ್ ಟಿ ವಿ
27 Feb 2019, 09:34 am
Download App from Playstore: