ಬದುಕು-ಸಂಘರ್ಷ
ಕೊಡವಿಕೊಂಡು ನಡೆವೆವು
ಕಿವಿಕೇಳಿದ ಮಾತುಗಳನ್ನು
ಮನಸಿನವರೆಗೂ ತಲುಪಬಾರದೆಂದು,
ತಾಳ್ಮೆಯಿಂದ ಕೋಪವ ಕೊಂದು
ನಂಬಿ ನಾಳೆಗೆ ಮತ್ತೆ ಆ ಮಾತುಗಳು
ಕೇಳಬಾರದೆಂದು.
ಹೊಟ್ಟೆಗಿಷ್ಟು ಹಿಟ್ಟು ಹಾಕಿಕೊಂಡು
ಪಾಲಿಗೆ ಬಂದದ್ದೇ ಪಂಚಾಮೃತ ಎಂದು ತಿಳಿದು,
ಪ್ರತಿನಿತ್ಯ ತೃಪ್ತಿಗೊಳ್ಳುವೆವು ಬದುಕಲು
ಸಂಘರ್ಷ ಅನಿವಾರ್ಯವೆಂದು.
ಇಂದು ಗೆದ್ದು ನಿಂತರೆ ನಾಳೆ ಬದುಕೆಂದು
ಅರಿವಿದ್ದರೂನು ಮನಸುಗಳ ಸಂಘರ್ಷಕೆ
ಸಿಲುಕಿ, ಕದಡಿ ಕೂರುವೆವು ಇರುವ
ನೆಮ್ಮದಿಯ ಕೆದಕಿ ತಾರೀಕು ಬದಲಾಗುವ
ಮುನ್ನ ಹೊಸದೊಂದು ಕಷ್ಟ ಹುಡುಕಿ.
- ಚುಕ್ಕಿ
15 Apr 2019, 07:31 am
Download App from Playstore: