ಕನ್ನಡವು ಹಿಮಾಲಯ ಗಿರಿಶಿಖರತನಕ.
ಕರ್ನಾಟಕದಿಂದಡಿಗಡಿಗೆ ಕನ್ನಡವೆ ತುತ್ತತುದಿಗೆ ಕನ್ನಡದ ಹಿರಿಮೆ ಸದಾ ಮೇಲು ಮೇಲಕೆ
ಕನ್ನಡವೇ ಎಂದಿಗೂ ನನ್ನ ಮನಕೆ ಎಲ್ಲೆ ಇದ್ದರು ಕನ್ನಡವೇ ನನ್ನ ಬಾಯ ಮೆಲುಕು,
ಕನ್ನಡ ವೆಂದರೆ ಸದಾ ಕಮಲ ಅರಳುವ೦ತೆ ಕನ್ನಡವೆ೦ದರೆ ಸದಾ ನಿರ್ಮಲ ಮನಸ್ಸಿನ೦ತೆ ಕನ್ನಡವಿದ್ದಲಿೢ ಕನ್ನಡಿಗರ ಸದಾ ಗೆಲುವಿದ್ದ೦ತೆ ಯಾರೆ ಆದರೂ ಕನ್ನಡ ನುಡಿಯಲು ಸರಳ ಸಂಜೀವಿನಿಯಿದ್ದ೦ತೆ,
ಕರ್ನಾಟಕದ ನೆಲ ಸದಾ ಕನ್ನಡಮಯ ಕನ್ನಡ ಭಾಷೆ ಸದಾ ಸ್ಮರಣೀಯ ಕನ್ನಡ ನುಡಿಗಳನ್ನಾಡಲು ಬಂಗಾರ ಸುರಿಮಳೆಯು ಏನೆ ಆದರು ಕನ್ನಡನಾಡು ನುಡಿ ನಮ್ಮೆಲೢರ ಕಣ್ಮಣಿಯು,
ಕನ್ನಡವ ಕಲ್ತು,ಸದಾ ಎಲ್ಲರಲ್ಲೂ ಕನ್ನಡವ ಬಿತ್ತು ಕನ್ನಡವೆಂಬುದು ಹಲವು ಕೋಗಿಲೆಯ ಕಂಠದ ರಾಗದ ಗತ್ತು
ಕನ್ನಡವಂಬುದು ಹಲವು ಕವಿಗಳ ಕಾವ್ಯದ ಗಮ್ಮತ್ತು ಕನ್ನಡ ಸದಾ ನಮ್ಮ ಬಾಯಲ್ಲಿ ಹೊಮ್ಮುವ ವಜ್ರದ ಕೀರಿಟಕ್ಕಿರುವ ಕಿಮ್ಮತ್ತು,
ಕನ್ನಡ ನದಿ ಜಲಗಳ ಪ್ರತಿ ಹರಿವಿನಲೢು ಕನ್ನಡ ಸಾಲು ಕರ್ನಾಟಕದ ಪ್ರತಿ ಮಣ್ಣಲೢು ಕನ್ನಡ ಚರಿತ್ರೆಯ ಸಾಲು ಕರ್ನಾಟಕದ ಪ್ರತಿ ಕನ್ನಡಿಗ ಕನ್ನಡದ ಕಾವಲು ಕರ್ನಾಟಕದ ಪ್ರತಿ ಹಸಿರಾದ ಗಿಡ-ಮರಗಳ ಎಲೆಗಳಲೢು ಕನ್ನಡವೇ ಪಿಟೀಲು,
ಕನ್ನಡವೆಂಬುದು ಪ್ರತಿ ಕವಿಗಳ ಲೇಖನ ಶಕ್ತಿ, ಅದುವೇ ನಮ್ಮ ಕವಿಗಳ ಯುಕ್ತಿ, ಕನ್ನಡ ನೆಲದಲ್ಲಿರುವ ನಮಗೆ ಕನ್ನಡವೇ ಮುಕ್ತಿ, ಬೆಳಗಿಸೋಣ ಕನ್ನಡದೀಪ ಹಚ್ಚುವ ಮೂಲಕ ಸಾವಿರ, ಕನ್ನಡ ಭಾಷೆಯೆಂಬ ಪಣತಿ,
ಕನ್ನಡ ನೆಲ,ಜಲ,ಪರಿಸರ ಸದಾ ಶಾಂತಿ ಕನ್ನಡ ಭಾಷೆಯೆಂಬುದು ಸದಾ ಹೊಳೆಯುವ ಕಾಂತಿ ಕನ್ನಡವೆಂಬುದು ಕರ್ನಾಟಕ ನೆಲದ ಒಗ್ಗಟ್ಟಿನ ಪ್ರತೀತಿ ಕನ್ನಡವೆಂಬ ಮ್ರೃದು ಮನಸ್ಸು ಎಂದೂ ಅಳುಕದು ಎಂಬುದೆ ನಮ್ಮ ವದಂತಿ,
ಕನ್ನಡ ಭಾಷೆಯ ಸಾರೋಣ ಎಲೢರ ಕಿವಿಗೆ ಮುಟ್ಟುವ ತನಕ
ಕನ್ನಡ ಭಾಷೆಯ ಸಾರೋಣ ಎಲೢರೂ ಪ್ರೀತಿಸುವ ತನಕ ಕನ್ನಡ ಭಾಷೆಯ ಮೊಳಗಿಸೋಣ ಎಲೢರಿಗಿದು ಬೇಕೆನುವ ತನಕ
ಕನ್ನಡವ ಮುನ್ನಡೆಸೋಣ ಹಿಮಾಲಯ ಗಿರಿಶಿಖರ ತನಕ.
- Pradeep Malabadi
12 Jun 2019, 03:16 pm
Download App from Playstore: