ನನ್ನಾಸೆ.

ಮುನ್ನಡೆಯಬೇಕು;ಏನಾದರೂ ಸಾಧನೆ ಮಾಡಬೇಕು,
ಗಡಿ ಕಾಯಬೇಕು,
ದೇಶದ ಶತ್ರುಗಳನ್ನು ಹೊದೆದುರುಳಿಸಿ ವೀರಯೋಧನಾಗಬೇಕು.

ಕ್ಷಣಕ್ಷಣಕ್ಕೂ ಕಾರ್ಯೋನ್ಮುಖವಾಗಿರುವ ಗಡಿಯಾರದ ಮುಳ್ಳು ನಾನಾಗ ಬೇಕು,

ಲೇಖನವೆಂಬ ಖಡ್ಗ ಹಿಡಿಯಬೇಕು;
ರಾಷ್ಟ್ರ ಕವಿಗಳ ಸಾಲಿನಲಿ ನಾನಿರಬೇಕು,

ಸುತನೂಜನಾಗಬೇಕು;
ಭರತಖಂಡದ ಸಾಧನೆಯ ಜಗತ್ತಿನೆಲ್ಲೆಡೆ ಮೊಳಗಿಸಬೇಕು,

ಭಾರವನ್ನು ಎತ್ತಬೇಕು;
ಸರ್ವಭಾರ ಹೊತ್ತುಕೊಂಡ ಧರಣಿ ನಾನಾಗಬೇಕು,

ವಿವೇಕ ಮಹಾತ್ಮರನ್ನು ಸ್ಮರಿಸಬೇಕು,
ಅವರು ನಡೆದಾಡುವ ಧೂಳಿನ ಕಣ ನಾನಾಗಬೇಕು,

ಒಂದು ದಿನ ಪಯಣ ಮುಗಿಸಬೇಕು,
ಸರ್ವಜನಾಂಗದಲ್ಲಿ ಚಿರಂಜೀವಿಯಾಗಬೇಕು.

- Pradeep Malabadi

12 Jun 2019, 03:37 pm
Download App from Playstore: