ನನ್ನಾಸೆ.
ಮುನ್ನಡೆಯಬೇಕು;ಏನಾದರೂ ಸಾಧನೆ ಮಾಡಬೇಕು,
ಗಡಿ ಕಾಯಬೇಕು,
ದೇಶದ ಶತ್ರುಗಳನ್ನು ಹೊದೆದುರುಳಿಸಿ ವೀರಯೋಧನಾಗಬೇಕು.
ಕ್ಷಣಕ್ಷಣಕ್ಕೂ ಕಾರ್ಯೋನ್ಮುಖವಾಗಿರುವ ಗಡಿಯಾರದ ಮುಳ್ಳು ನಾನಾಗ ಬೇಕು,
ಲೇಖನವೆಂಬ ಖಡ್ಗ ಹಿಡಿಯಬೇಕು;
ರಾಷ್ಟ್ರ ಕವಿಗಳ ಸಾಲಿನಲಿ ನಾನಿರಬೇಕು,
ಸುತನೂಜನಾಗಬೇಕು;
ಭರತಖಂಡದ ಸಾಧನೆಯ ಜಗತ್ತಿನೆಲ್ಲೆಡೆ ಮೊಳಗಿಸಬೇಕು,
ಭಾರವನ್ನು ಎತ್ತಬೇಕು;
ಸರ್ವಭಾರ ಹೊತ್ತುಕೊಂಡ ಧರಣಿ ನಾನಾಗಬೇಕು,
ವಿವೇಕ ಮಹಾತ್ಮರನ್ನು ಸ್ಮರಿಸಬೇಕು,
ಅವರು ನಡೆದಾಡುವ ಧೂಳಿನ ಕಣ ನಾನಾಗಬೇಕು,
ಒಂದು ದಿನ ಪಯಣ ಮುಗಿಸಬೇಕು,
ಸರ್ವಜನಾಂಗದಲ್ಲಿ ಚಿರಂಜೀವಿಯಾಗಬೇಕು.
- Pradeep Malabadi
12 Jun 2019, 03:37 pm
Download App from Playstore: