ತಿಳಿ, ಇದು ನಿಜಾ
ಕುಣಿಯ ಬ್ಯಾಡ
ನೀ ಮನುಜಾ,
ನಡುವೆ ಬಂದ
ಕಸವರವ ನೆನೆದು.
ದುಡುಕ ಬ್ಯಾಡ
ನೀ ಗಿರಿಜಾ,
ನಡಕ್ಕೆ ಬಿದ್ದ
ನಡುಪಟ್ಟಿಯ ನೆನೆದು.
ಹುಡುಕ ಬ್ಯಾಡ
ನೀ ಕಣಜಾ,
ನಿನ್ನಲ್ಲಿ ಇದ್ದ
ಸಂಪತ್ತ ನೀ ಮರೆತು.
ಹಾಲುಣಿಸ ಬ್ಯಾಡ
ನೀ ಹಾವಿಗೆ,
ವಿಷ ಕಕ್ಕದೇ ಬಿಡದು
ನಿನ ಕರ್ಮದ ಹಾದಿಗೆ.
ಮೆರೆಯ ಬ್ಯಾಡ
ನೀ ತನುಜಾ,
ಹಿಡಿಮಣ್ಣು ಹಾಕಿದರೆ
ನಿನ್ನಸ್ಥಿಗೆ ನೀನೇ ರಜಾ.!
- ನಾಗರಾಜ ಬಾಕೆ೯ರ್
30 Jun 2019, 05:46 pm
Download App from Playstore: