ನನ್ನರಸಿ

ಜೊತೆಯಲಿ ಸಪ್ತಪದಿ ಹಾಕಿದಳು,
ಸಾಯುವವರೆಗೂ ಜೊತೆಯಲಿರುವೆನೆಂದು
ಮಾಡಿದಳು ಪ್ರಮಾಣ.

ಕಷ್ಟ ಸುಖ ಏನೇ ಇರಲಿ
ನೋವು-ನಲಿವು ಏನೇ ಬರಲಿ
ಜೊತೆಯಲ್ಲೆ ಇರುವೇನು ಎನ್ನುತ್ತಿದ್ದಳು ನನ್ನರಸಿ,

ಬಂಧು ಬಾಂಧವರ ಆಧಾರಿಸಿ
ಗುರು -ಹಿರಿಯರಿಗೆ ಗೌರವಿಸಿ
ಅಥಿತಿಗಳಿಗೆ ಸತ್ಕಾರಿಸಿ
ತಾಯಿ ಪ್ರೀತಿ ಹಂಚಿದಳು ನನ್ನರಸಿ,

ಮಕ್ಕಳ -ಲಾಲನೆ ಪಾಲನೆ
ನನ್ನ ಎಲ್ಲಾ ಜ್ಞಾನಾರ್ಜಜನೆಗೂ
ಅವಳೇ ಪ್ರೇರಣೆ,

ವಜ್ರ- ವೈಡೂರ್ಯ ಎಂದು ಕೇಳಲಿಲ್ಲ,
ನನ್ನ ಎಲ್ಲಾ ನೋವಿನಲ್ಲೂ
ನನ್ನ ಉರಿದುಂಬಿಸಿದಳಲ್ಲ.
:--ವೀಣಾ ಲಿಂಗಣ್ಣ
ರಾಯಚೂರು.

- Veena

11 Sep 2019, 09:41 am
Download App from Playstore: