ಮಸಣದ ಹೂ

ನಿನ್ನೆ ಅವಳು
ಮೊಗ್ಗಾಗಿದ್ದವಳು,
ಕಾಣಲೇ ಇಲ್ಲ
ಇಲ್ಲಾರ ಕಣ್ಣಿಗಿವಳು.

ಇಂದು ಮುತೈದೆ
ಆಗ ಹೊರಟಳವಳು,
ಸೇರಲೇ ಇಲ್ಲವಿಲ್ಲಿ
ಯಾರ ಮನದಂಗಳಕ್ಕಿವಳು.

ಸಂಜೆ ಸಡಗರದಿ
ತುಸು ಸೆರಗಿಳಿಸಿ ರಸ್ತೆಗಿಳಿದಳು,
ಮುತ್ತಿದರೆಲ್ಲರಿಲ್ಲಿ
ಹವಳದ ಗೊಂಬೆಯಾದಳು.

ಹೊಟ್ಟೆ ಪಾಡಿನಿಂದಾಗಿ
ಪರಿಸ್ಥಿತಿಗೆ ಸಿಕ್ಕು ಕಲ್ಲಾದಳು,
ನಾಯಿ ಮುಟ್ಟಿದ ಮಡಿಕೆಯಾಗಿ
ಬರೀ ಮಸಣಕ್ಕೆ ಶೃಂಗಾರವಾದಳು.

ನಾಗರಾಜ ಬಿ
ಹಾವೇರಿ

- ನಾಗರಾಜ ಬಾಕೆ೯ರ್

20 Sep 2019, 08:00 am
Download App from Playstore: