ಭ್ರೂಣ ಬರೆದಿದೆ ಮುನ್ನುಡಿ
ಮರುಳ ಮನಗಳ
ದುರುಳ ಆಶೆಗೆ
ಕರುಳ ಬಳ್ಳಿಯು ಉರುಳಿಗೆ
ಮರಣ ನೋವನು
ಒತ್ತಿ ಮನದೊಳು
ಅಬ್ಬೆ ಇತ್ತಳು ಒಪ್ಪಿಗೆ.
ಇರುಳ ಕಾಡಲಿ
ಬಿರಿವ ಹೂವಿಗೂ
ಬೆಳಕ ಕಾಣುವ ಹಂಬಲ
ಯಾರ ನೋವನು
ಯಾರು ಬಲ್ಲರು
ಚರಮ ಗೀತೆಗೂ ಚಂಚಲ.
ವಂಶ ಗೋಪುರ
ಕಟ್ಟಲಾಗದ
ಗತಿಯು ಬರಲಿದೆ ಸನ್ನಿಧಿ
ಹಲ್ಲ ಸೇರುವ
ಭ್ರೂಣ ಬರೆದಿದೆ
ಘೋರ ಕಾಲಕೆ ಮುನ್ನುಡಿ.
- basheer
21 Sep 2019, 09:05 am
Download App from Playstore: