ಎಂಗಿತ್ತೂ ನನ್ನೂರು


ಎಂಗಿತ್ತೂ ನನ್ನೂರು
ಎಂಗಾಯ್ತೂ ಈಗ್ನೋಡು
ಗುರ್ತೇನೆ ಸಿಕ್ಕಾಕೆ ಇಲ್ಲಾ....

ಸ್ವರುಗ್ದಂಗೆ ಇದ್ದಿದ್ನ
ನರ್ಕಾನೆ ಮಾಡ್ಬುಟ್ರು
ಮನ್ಸನ್ಗೆ ಕರ್ಣೆನೆ ಇಲ್ವಾ.....

ಬೂಮ್ತಾಯಿ ಹಸ್ರೆಲ್ಲ
ಬರ್ಡಾಗಿ ಓಗ್ಬುಡ್ತು
ಪ್ರಾಣಿಗ್ಳೆ ಕಾಣ್ಸಾಕೇ ಇಲ್ಲಾ.....

ಎಲ್ನೊಡ್ರೂ ಬಿಲ್ಡಿಂಗು
ರೋಡೆಲ್ಲಾ ಟ್ರಾಫಿಕ್ಕು
ಎಲ್ಲೋಗ್ಲಿ ಗೊತ್ತಾಗ್ತಾ ಇಲ್ಲಾ....

ನಾನಾಡ್ತಿದ್ ಜಾರ್ಬಂಡೆ
ನೀನ್ ಹತ್ತಿದ್ ಕಲ್ಲಾನೆ
ಎಲ್ಲೋದ್ವು ಕಾಣ್ತಾನೇ ಇಲ್ಲಾ.....

ಕೆರೆ ದಂಡೆಲ್ ಕೂತ್ಕಂಡು
ಮಿಂಚುಳ್ಳಿಗ್ ಕಲ್ಲೊಡ್ ದು
ನೀರಾಡ್ತಿದ್ ಇಲ್ಲೇನೆ ಅಲ್ವಾ...,

ನಮ್ಕೇರೆ ಕಾಣ್ತಿಲ್ಲ
ಬೆಳ್ಳಕ್ಕಿ ಇನ್ನಿಲ್ಲ
ಕಸ್ಸಾನೇ ತುಂಬ್ಸವ್ರೆ ಎಲ್ಲಾ....

ಅದೇನೂ ಬುಡು ಅಂತ
ಆವಾಗ್ಲೇ ಅನ್ ಕಂಡೆ
ಔರ್ಮನ್ಸಾಗ್ ಕಸ್ ತುಂಬೈತಲ್ವಾ!!

ಇಲ್ಲಿತ್ತೂ ದೇವುಸ್ಥಾನ
ದಿನಾಗ್ಲೂ ಸ್ಕೂಲ್ಗೊಯ್ತ
ನಂಸ್ಕಾರ ಮಾಡ್ತಿದ್ವಿ ಅಲ್ವಾ.....

ದೇವ್ಸ್ಥಾನ ಕೆಡ್ವಾಕಿ
ದೊಡ್ಮಾಲು ಕಟ್ಟವ್ರೆ
ಇವ್ರಿಗೆ ಬುದ್ದೀನೆ ಇಲ್ವಾ....

ಶಾನ್ಬೋಗ್ರ ಮನ್ತಾವ
ಕೆಂಪ್ಡಬ್ಬಿ ಒಂದಿತ್ತು
ಪತ್ರಾಕಕ್ ಓಡ್ತಿದ್ವಿ ಅಲ್ವಾ....

ಆ ಜಾಗ್ದಾಗೀಗಲ್ಲಿ
ಕಸದ್ ಡಬ್ಬಿ ಇಟ್ಟವ್ರೆ
ಕಣ್ಣಾಗೆ ನೀರ್ ಬರಕ್ಕಿಲ್ವಾ.....

ತಿಂಗಳಾಗೆ ಒನ್ದಿವ್ಸ
ಡಬ್ಬಿನಾ ಹೆಗಿಲ್ಗಾಕ್ಕಂಡ್
ಉಸ್ಸೇನಿ ಬರ್ತಿದ್ದ ಗೊತ್ತಾ......

ಐದ್ ಪೈಸಾ ಕೊಟ್ಬಿಟ್ಟು
ಗೊಂಬ್ಯಾಟ ನೊಡ್ಬುಟ್ರೆ
ತಿಂಗ್ಳೆಲ್ಲಾ ಖುಶೀನೆ ಗೊತ್ತಾ.....

ಉಸ್ಸೇನೀ ಅಟ್ಟೀನ
ಉಡಿಕ್ಕಂಡೋಗಿದ್ದೆ
ಇರ್ಬೈದ್ದು ಮಸೀದ್ ತಾವಂತಾ..,

ಅಲ್ನೊಡಿದ್ರೇನೈ ತೆ
ಐನಾಕ್ಸು ಬಂದೈತೆ
ಐನೂರಕ್ಕೊಂದ್ ಟಿಕೆಟ್ಟಂತಾ.....

ಅಂಗೇನೆ ಮುಂದ್ಕೋದೆ
ಇಸ್ಕೂಲೀನ್ ತಾವ್ ಬಂದೆ
ಫ್ರೆಂಡ್ಸಾರಾ ಸಿಕ್ತಾರಾ ಅಂತಾ....

ಆಗ್ಲೇನೆ ಗೊತ್ತಾತು
ಇಸ್ಕೂಲ್ನ ಮಾರ್ ಬುಟ್ಟು
ಕಾಂಪ್ಲಕ್ಸ್ನಾ ಕಟ್ತವ್ರೇ ಅಂತಾ

ರಾಮಜ್ಜನ್ ನಾ ಕೇಳ್ದೆ
ನಾವತ್ತಿದ್ ಗುಡ್ದಾನೂ
ಗುಡ್ದಾಗಿದ್ ಚಿಕ್ಕೋಟೆ
ಕಣ್ಸಾಕೆ ಇಲ್ವಲ್ಲ ಅಂತಾ...

ರಾಮಜ್ಜಾ ಆತ್ಕಂಡ
ಗುಡ್ಡನಾ ಸಿಡ್ಸವ್ರೆ
ರೈಲ್ಪಟ್ರೀ ಆಕಾಕೇ ಅಂತಾ....

ಯಾರನಾ ಹಾಳಾಗ್ಲಿ
ಊರಚೇ ಬಂದಬುಟ್ಟೆ
ಹಣ್ಮಪ್ಪನ್ ನೋಡಾನ ಅಂತಾ....

ಒಟ್ಟೆಲ್ಲಾ ಸಂಕ್ಟಆತು
ಬುಲ್ಡೋಜರ್ ಕೆಳಗ್ ನೋಡಿ
ಹಣ್ಮಪ್ಪಂಗೀಗತಿ ಬಂತಾ?......

ಪ್ರಕೃತಿ ತಾಯ್ ಮ್ಯಾಗೆ
ಆತ್ಯಾಸೆಗ್ ಮನ್ಶಾನೂ
ಅನ್ಯಾಯ ಮಾಡ್ತವ್ನೆ ಅಲ್ವಾ....

ನಾನೂನೂ ಕಾಯ್ತೀವ್ನಿ
ಉಮ್ಮೀದೂ ಮಡಿಕ್ಕಂಡು
ಯಾವಾಗ ನಿಲ್ಸ್ತಾನೆ ಅಂತಾ

ದೇವ್ರೇನೆ ಬಂದ್ ಬುಟ್ಟು
ನನ್ಮುಂದೆ ನಿಂತ್ಕಂಡು
ಕೇಳಿದ್ರೆ ಏನ್ ಬೇಕು ಅಂತಾ....

ಕೇಳ್ತೀನಿ ಅವುನ್ನಾಗ
ನಮ್ಮೂರ್ನ ಮೊದುಲ್ನಂಗೆ
ಮಾಡಾಕೆ ಆಯ್ತೈತಾ ಅಂತಾ.....
ಮಾಡಕೆ ಆಯ್ತ್ತೈತಾ ಅಂತಾ....

- ಜೈಮಿನಿ

24 Sep 2019, 05:29 am
Download App from Playstore: