ಮರಗಳ-ಮರುಗು

ಬ್ಯಾಸಗಿ ದಿವಸಕ ಬೇವಿನ ಮರ ತಂಪ ಅಂತಿದ್ರಿ.
ಅರಳಿ-ಕಟ್ಟೆಯ ಮೇಲೆ ಊರಾ ನ್ಯಾಯ ಹೇಳ್ತಿದ್ರಿ..
ಊರ ಮುಂದಿನ ಬಸವಣ್ಣಗ ಬಿಲ್ಪತ್ರಿಯ ಎರಸ್ತಿದ್ರಿ.
ಇಗ್ಯಾಕೆ ಇಷ್ಟು ಬದಲಾಗಿರೀ, ತಿಳಿವಲ್ತು ನಿಮ್ಮ ಆಟ!!

ಬನ್ನಿ ತಗೊಂಡು ಬಂಗಾರದಂಗ ಇರೋಣ ಅನ್ನೋಕೆ ಅಸ್ಟೆನಾ ನಾವು?
ಚಪ್ಪರಿಸಿ ನಾ ಬಿಟ್ಟ ಹಣ್ಣು ತಿನ್ನೋಕೆ ಅಷ್ಟೇನಾ ನಾವು
ರಣ-ಬಿಸಿನಲಿ ನಿಮಗೆ ನೆರಳು ಕೊಟ್ಟಿಲ್ಲೇನು ನಾವು?
ತಿಂದ ಮನೆಗೆ ಜಂತಿ ಎಣಿಸೋರು ನೀವಲ್ಲದೆ ಮತ್ತೆಲ್ಲಿದಿರಾ?

ನಿಮ್ಮ ಆಡು-ಕುರಿ ತಿನ್ನಸಲಿಕ್ಕೆ ನಾವೇನು ಅಂದವರಲ್ಲ!
ನಿಮ್ಮ ಕೂರಿಗೆ-ಕುಂಟೆಗೆ ನಾವೇನು ತಂಟೆ ತಗದವರಲ್ಲ.!!
ಅಷ್ಟೇ ಯಾಕೆ ನಮ್ಮನ್ನ ಕತ್ತರಸಿ ಜಂತಿ ಮಾಡಿಕೊಂಡಗಲೂ ಪಿಟಕ್ ಅಂದವರಲ್ಲ!!!
ಇಷ್ಟಿದ್ದರು ಅದು ಎಷ್ಟರ ಐತಿ ನಿಮ್ಮ ದಬ್ಬಾಳಿಕೆಯ ದೌಲತ್ತು??

ಲಕ್ಷ್ಯ ಕೊಟ್ಟ ಕೇಳ್ರಿ ಇನ್ನ ನಮ್ಮಿಂದ ಆಗಲ್ಲ..
ಅನಾಮತ ಎಂಥ ಪಾಪ ಅಂದ್ರ ಐತಿ ಇಲ್ಲ ಅದಕ?
ನಮಗ ತಲೆ ಕೇಟ್ರಾ ಸುಟ್ಟು ಬುದಿನಾ ಆಗ್ತಿರೀ!!
ಈಗಲಾದರೂ ಕೈ ಮುಗಿತಿವಿ ನಮ್ಮನ್ನ ಉಳಿಸಿ-ಬೆಳೆಸಿ.
ಸುಗ್ಗಿ..

- ಆರ್ ಎಸ್ ಸುಗ್ಗಿ.

09 Oct 2019, 01:58 pm
Download App from Playstore: