ಪಯಣ

ಬಹುವಾಗಿದೆ ಬಹುವಾಗಿದೆ ಚಿಂತೆ
ಮನದೊಳಗೆ ನಿಲ್ಲದಾ ಬೀತಿಯಾ ಶಂಕೆ.

ಕಾಡುತ್ತಿದೆ ಕಾಡುತ್ತಿದೆ ನಿರ್ಮೋಹ ಭಾವ
ವೈರಾಗ್ಯದೆಡೆಗೆ ಜೀವ..

ಪೋಷಿಸಿದೆ ಪೋಷಿಸಿದೆ
ಈ ತನುವ ಜೀವ..
ಬೇಯುತಿದೆ ಬೇಯುತಿದೆ
ಆಂತರ್ಯದಿ ಕುಲುಮೆಯಾ ಭಾವ.

ಎಂದಾದರೊಂದು ದಿನ
ತೀರಲಿದೆ ಆಯ
ಶೂನ್ಯದೆಡೆಗೆ ಬಳುಕುವುದೀ ಕಾಯ..
ಕೃಶ ಕಾಯದ ಆತ್ಮವಿದು ಚೈತನ್ಯ...
ಸಲುಹಿದಾ ಪಂಚಭೂತಗಳಿಗಿರಲಿ ನಮನ..
ಪಂಚಭೂತಗಳಿಗಿರಲಿ ನಮನ.

ಪವನ ಕುಮಾರ ಕೆ. ವಿ
ಬಳ್ಳಾರಿ
9900515957

- PavanKumarKV

02 Nov 2019, 05:40 pm
Download App from Playstore: