ಪಯಣ
ಬಹುವಾಗಿದೆ ಬಹುವಾಗಿದೆ ಚಿಂತೆ
ಮನದೊಳಗೆ ನಿಲ್ಲದಾ ಬೀತಿಯಾ ಶಂಕೆ.
ಕಾಡುತ್ತಿದೆ ಕಾಡುತ್ತಿದೆ ನಿರ್ಮೋಹ ಭಾವ
ವೈರಾಗ್ಯದೆಡೆಗೆ ಜೀವ..
ಪೋಷಿಸಿದೆ ಪೋಷಿಸಿದೆ
ಈ ತನುವ ಜೀವ..
ಬೇಯುತಿದೆ ಬೇಯುತಿದೆ
ಆಂತರ್ಯದಿ ಕುಲುಮೆಯಾ ಭಾವ.
ಎಂದಾದರೊಂದು ದಿನ
ತೀರಲಿದೆ ಆಯ
ಶೂನ್ಯದೆಡೆಗೆ ಬಳುಕುವುದೀ ಕಾಯ..
ಕೃಶ ಕಾಯದ ಆತ್ಮವಿದು ಚೈತನ್ಯ...
ಸಲುಹಿದಾ ಪಂಚಭೂತಗಳಿಗಿರಲಿ ನಮನ..
ಪಂಚಭೂತಗಳಿಗಿರಲಿ ನಮನ.
ಪವನ ಕುಮಾರ ಕೆ. ವಿ
ಬಳ್ಳಾರಿ
9900515957
- PavanKumarKV
02 Nov 2019, 05:40 pm
Download App from Playstore: