ಮುಂಡಿಗೆ ಪದ್ಯ-೦೧.

ಮುಂಡಿಗೆ ಪದ್ಯ-೦೧
____________________

ನಿದಿರೆಯೊಳಗೊಂದು ಅಮಲು
ಕೊಡಲು ಬಂದಳು ತಾಂಬೂಲು
ಬೆಚ್ಚಿ ಬಿದ್ದಾಗ ಇಳಿ ಹೊತ್ತು ಸಂಜೆ
ಅಕ್ಕರೆಯ ತೋರಲವಳೇ ಇಲ್ಲ.

ಬಿಕ್ಕುತ್ತ ಬಿದ್ದಿತ್ತು ಬೆಕ್ಕು;ಹೊಸ್ತಿಲೊಳಗೆ
ಹಾಲು ಚೆಲ್ಲಿದ ಪಾತ್ರೆ
ಶಿವನಿಗಂಟಲೇ ಇಲ್ಲ ಬಿಲ್ವ ಪತ್ರೆ
ಹಿಗೇಕೆ ಎಂದು,ಮನನೊಂದುಕೊಂಡು
ಊರುರು ತಿರುಗಿದ ಮಾತು
ಎನೆಯಿಲ್ಲದೆ ಕೊನೆಗೊಂಡು
ನೆಲಕುರಳಲೇ ಇಲ್ಲ.

ಬಾಯೊಳಗೆ ಬಾಯಿಟ್ಟು
ತಾಂಬೂಲು ತಿಂದ ಎಂಜಲು
ದೀಪದೊಳಗೆ ಅಡಗಿದ
ಎಣ್ಣೆ ಬತ್ತಿಯಾದುದ ಕಂಡ
ಸಂತ ಬೈರಾಗಿಯ ಮಾತು
ಸುಳ್ಳಾಗಲಿಲ್ಲ .

ಇನಿತೆಂದು‌ ಮನನೊಂದು
ಸೂರ್ಯನಾಡುವ ಮಾತು
ಬಲು ಸೊಗಸು ಇಹುದೆಲ್ಲ
ಕೇಳಲರಿಯಲು, ಇಲ್ಲಿ ಜನರೇ ಇಲ್ಲ!!!


--- ಸುರೇಶ ಜಕಾತಿ .ಜಮಖಂಡಿ
8746086658.

- ಸುರೇಶ ಜಕಾತಿ.ಜಮಖಂಡಿ

03 Jan 2020, 01:21 pm
Download App from Playstore: