ಮುಂಡಿಗೆ ಪದ್ಯ-೦೨
ಮುಂಡಿಗೆ ಪದ್ಯ-೦೨
__________________
ಬರುವಾಗಲದು ಬಿಂಕು ಬಿಣ್ಣಾಣದ ಪಾತರಗಿತ್ತಿ
ಅರಮನೆಯಂದದಿ ಸೊಗಸು ವಯ್ಯಾರವ
ಕಂಡು ಹಿಂಜರಿಯದೆ ಬಂದು ನೆಲೆಸಿಹುದು
ನೊಂದು ಸಾಗುವುದು ಈ ಭೂಮಿ ಮೇಲೆ!
ಹಿಂಸೆಯ ತಾಳದ ತಂಬೂರಿಯ ಮೀಟುತ
ದಿನಗಳನೆನಿಸಿ ಮುಂದೆ ದೂಡುತ್ತ
ಎಷ್ಟು ದಿನವಿದಕೆ ಬಾಯಾರಿಕೆ; ಮೇಲೆ ಬಿಸಿ ತಾಪ
ನೂರ್ಮಡಿಲು ಗೆದ್ದಿಹುದು;
ಬಂದು ಒಂದೇ ಸವನೇ ಬಿಕ್ಕುತ್ತಿದೆ.!!
ಇಂದಿಗೆ ನೊಂದಿಹುದು, ನಾಳೆ ಎಂಬುದ ಕನಸು
ಮತ್ತೆ ತಡೆವರಿಸಿ ಬಾಯಾಡಿಸುತ್ತಲಿದೆ
ಮುಂದೆ ನಲಿವುದು ಹಿಂಬದಿಯ ಬಯಲಲ್ಲಿ
ಕೆಸರುಗದ್ದೆಯ ಓಟ ;ಮುಂದೈದು ಪಂಚ ತಾರೆಯರು
ಆರತಿಯ ಬೆಳಗುತಿಹರು!!!
ಸೊಂಟ ಕಟ್ಟಿದ ಭಾಷೆ,ವಿಧ ವಿಧದ ತೃಷೆ ನಮಗೆ
ಬಲಿಯ ಕೊಡಲವರು ಆಡುವರು ಮೃದುಭಾಷೆ
ಆರು ನಾರಿನ ಹಗ್ಗ ಸೊಂಟಕ್ಕೆ ಬಿಗಿದಿಹರು
ಬಿಡಿಸೆಂದು ಭಗವಂತನ ಬೇಡುತಿಹರು!!!!
ಒಂದೇ ಮಗ್ಗುಲಲ್ಲಿ ನಾಲ್ಕೈದು ಮಕ್ಕಳು
ಎಣಿಕೆ ಮಾಡುವುದರೊಳಗೆ ಜೀಕುತಿಹರು
ಎಡದಂಡೆ ಬಲದಂಡೆ ಬಯಲು ಸೀಮೆಯಲಿ
ನಾರಿ ತಾ ವಸ್ತ್ರವಿಡಿದು ಕುಣಿದಿಹಳು!!!!!
ಎದೆ ಅಂಗಿ ಹರಿದಿರಲು ಕಲೆಯೊಂದು ಕಲಿತು
ಬಲಿತ ದೇಹದ ಭಾಗ ಭಾವಕ್ಕೂ ನಿಲುಕದು
ಎದೆಯ ತೂಕದ ಮುಂದೆ ಮತ್ತೆ ಇನ್ನೇನು?
ಕತ್ತು ಹಿಸುಕುವ ಉದ್ಯೋಗದಿ ಭ್ರಷ್ಟ ಭಾವ!!!!!!
ನಯ ವಿನಯದೆದಿರು ಜಾನಕಿಯ ಸೂಚನೆ
ಹಿಂದೆ ಕೈಕೆಯಿಯ ಶಪಥ ಪಟ್ಟಿ
ಮುಂದೆ ಕನ್ಗಳ ಸೊನ್ನೆಯನು ಬರೆಯದೆ
ನೊಂದ ಬಕುತನಿಗಿನ್ನೂ ನಾಲ್ಕು ಗೇನು!!!!!!!
--- ಸುರೇಶ ಜಕಾತಿ.ಜಮಖಂಡಿ
8746086658
ವಿಳಾಸ:- ಶ್ರೀಹರಿ ನಿಲಯ,ಮಹಾಲಿಂಗೇಶ್ವರ ಕಾಲೊನಿ.ಜಮಖಂಡಿ
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕು- 587301
- ಸುರೇಶ ಜಕಾತಿ.ಜಮಖಂಡಿ
03 Jan 2020, 11:15 pm
Download App from Playstore: