ಮುಂಡಿಗೆ ಪದ್ಯ-೦೩

ಮುಂಡಿಗೆ ಪದ್ಯ-೦೩
___________________

ಬರಹದುರಿಗಿನ್ನೂ ಬದುಕುವುದು ಎಕೆ?
ಸಾಕು ಸಲುಹೆನ್ನ ಮಂದಾರ ಗಿನಿಯೇ
ಬಾಯ್ತುಂಬ ಹೊಗಳುವರ ಬೇಗುದಿಗೆ ನೀ ಸಿಕ್ಕು
ಸೊಡರು ಮಾತಿನಿಂದ ಜಂಬ ಕೊಚ್ಚಿ.

ಅರಸನೂ,ಮಂತ್ರಿಯೂ ಆಗಬಹುದೇನೋ
ನೀನೆರೆವ ನೀಕೊರೆವ ಬದುಕು ಬವನೆ
ಬಂದರಿಯೇ ನಾ ಅದನು ತದಕು ಸೊಡರೆ
ಅದಕವನು ಅಂಜುವನು ನುಂಗುವನು ಒಡವೆ

ಬಂದರೆ ಬಾ ಇನ್ನೂ ಹದಳು ಕೊಳಗಳು
ಅಲ್ಲಿನ್ನೂ ನೀರಿಲ್ಲ ಮೆಲವೂ ತಾ ಹಾಸಿಲ್ಲ
ಸುಂಟರದ ಸದ್ದಡಗಿ ಗೆಲ್ಲತಿಹುದಡವಿ
ಸಂತೆಕಂಡವರಿಗಿನ್ನೂ ಸಾವು- ನೋವು

ಅಂದು ಇಂದಿಗೆ ನಿನ್ನ ಸಂಗಡವೂ ಚೆನ್ನ
ಬರದ ನಾಡಲಿ ಬರುವ ನೀ ಎನ್ನ ಚೆಲುವ
ಉಲಿಯಕೊಂಬುವರವರು ನಲಿದರವರಿಲ್ಲ
ಚೆಲುವ ಚೆನ್ನಿಗರಾಯ ನಿನ್ನಳವೆ ಅವರಿಗಿಲ್ಲ.

ಸದ್ದುಗದ್ದಲವೂ ಸುದ್ದಿ ತೋರಣವೂ
ಎದೆ ಸೀಳಿದರಕ್ತವದಕೆ ಹಾವಿನೆಂಜಲು
ಬಾ ಎಂದರೆ ಬರದಿರುವ ತಮ್ಮನ್ನೇ ಮಾರಿರುವ
ತೊಳಲಾಟದ ಮೌನಕೆ ಶರಣರವರಿಲ್ಲ.

ಬಂದ ಬಾಯಾರಿಕೆ ತೀರಿಸಲು ಮೈದಡವಿ
ತಂದ ತಾಂಬೂಲು ಬಾಯಲ್ಲಿ ಇರಿಸಿ
ಇದು ಚೆಂದ ಮಧು ಸ್ನೇಹ ಎನ್ನತ್ತಲಿದ್ದಾರೆ
ಕಂಡ ಬ್ರಾಂತಿಯನವರು ನೆನೆಯುತ್ತಲಿದ್ದಾರೆ.

ನೀನಾರೋ, ಅವರಾರೋ ನನಗೇತಕೆ ಚಿಂತೆ
ಬಂದು ಹೋಗುವ ನಡುವೆ ಗದ್ದಲದ ಸಂತೆ
ಬರೆವ ಸೂರ್ಯನು ಒಮ್ಮೆ ಕರಗಿ ನೋಡುವನು
ಇವನಲ್ಲಿ ಅವನಲ್ಲಿ ಮೂಗು ತುರಿಸುವನು.


// ಸುರೇಶ ಜಕಾತಿ.ಜಮಖಂಡಿ//
8746086658

- ಸುರೇಶ ಜಕಾತಿ.ಜಮಖಂಡಿ

04 Jan 2020, 06:43 pm
Download App from Playstore: