ಅವನು
ಅವನು
---------
ನಲಿವುಗಳ ಆಚೆಯಲಿ
ನಾವಿಡುವ ಹೆಜ್ಜೆಗಳಲಿ
ಶಾಂತಿಧೂತನ ಪಾತ್ರ .
ಅವನೆತ್ತರಕೆ ಬೆಳೆಯಲು
ಅವನಿಟ್ಟ ಕಸ್ತೂರಿ
ಮೂಸಿಸಲು ನಮಗೆ ಸಮಯವಿಲ್ಲ.
ಕಿರುನಾಲಿಗೆಗೊಂದು
ಹಿರಿನಾಲಿಗೆಯ ಆಶ್ರಯ
ದೇವನೊಲುಮೆಯ ಕೀರ್ತಿ.
ಸಂತೋಷವ ಗಳಿಸಿಡಲು
ಮುಪ್ಪು ಆವರಿಸುವ ಮುನ್ನ
ಒಳಹೊಕ್ಕು ನೋಡೊಮ್ಮೆ ಅವನ.
ಅವನಂದುಕೊಂಡದ್ದು
ನಾವಿಂದು ಕೊಂಡದ್ದು
ಎರಡೂ ಒಂದೇ.
-- ಸುರೇಶ ಜಕಾತಿ.ಜಮಖಂಡಿ
8746086658.
- ಸುರೇಶ ಜಕಾತಿ.ಜಮಖಂಡಿ
05 Jan 2020, 09:46 am
Download App from Playstore: