ಗ್ರಹಣ ಹಿಡಿದದ್ದು ಯಾರಿಗೆ..?
ಅಧಿಕಾರದ ಮದವೇರಿ ಕುರ್ಚಿಗಾಗಿ
ಕಾದಾಡಿ ಅರಿವಳಿದವಗೆ ಹಿಡಿದಿದೆ ಗ್ರಹಣ
ಇಲ್ಲದವರ ದಳ್ಳುರಿಯ ಕಿಡಿ ತಾಕಿ
ಉಳ್ಳವರ ಅಹಂ ಸುಟ್ಟು ಹಿಡಿದಿದೆ ಗ್ರಹಣ
ಮಾನವ ಧರ್ಮದ ನಿಜವರಿಯದ
ನರಮೇಧದ ಕತೃಗಳಿಗೆ ಹಿಡಿದಿದೆ ಗ್ರಹಣ..
ನರನೇ ಹರನೆಂದು ಮೇರೆದ ಕಾಲಕ್ಕೆ
ಕೆಂಡಕಾರುವ ವೈರಿಗಳ ವರ್ಗಕ್ಕಿದೆ ಗ್ರಹಣ
ಭಾರತದ ಏಕತೆಯ ಜೇನುಗೂಡಿಗೆ
ಕಲ್ಲೆಸದ ಖಧೀಮರಿಗೆ ಹಿಡಿದಿದೆ ಗ್ರಹಣ..
ಹೆಣ್ಣು ಹಣ್ಣೆಂದು ಉಂಡೊಗೆದಾತಂಗೆ
ಎನೂ ಮಾಡದ ಕಾನೂನಿಗಿದೆ ಗ್ರಹಣ..
ಸೌಂದರ್ಯ ಲಾಲಸೆಯಲಿ ಮೊಳಗಿದ
ಪಾಪಿಗಳ ಕೂಪದಡಿಲಿದೆ ಕರಾಳ ಗ್ರಹಣ.
ಎಲ್ಲ ತಿಳಿದು ತಪ್ಪೆಸೆಗುವ ಮನುಕುಲದ
ನಿರ್ಣಾಮಕ್ಕೆ ಕಾರಣವಾಗದೆ.? ಗ್ರಹಣ.!
- ಲಕುಮಿಕಂದಮುಕುಂದ
16 Jan 2020, 03:24 am
Download App from Playstore: