ಛಂದ ಪದ್ಯಗಳು

ಮುಕ್ತಗಳು
-------------------------------
೦೧.ಭಾವಲಹರಿ
______________________
ತನು ಒಂದಾರೂ ಅದರೊಳಗೆ
ಭೂಕಂಪ,ಸಮುದ್ರ ಸುನಾಮಿ
ಸೃಷ್ಟಿಸಲೆಂದೇ ಇರುವ
ಹಲವು ರೀತಿಯ ಮನಗಳು
ಇರುವುದೊಂದೇ ಭಾವಲಹರಿ
ಎಲ್ಲರೆದೆಯ ಕುಟ್ಟಲು.

೦೨.ನಾಲಿಗೆ
--------------------
ನಮ್ಮ ಮನೆಯ ನಾಯಿಯದು
ಚಪಲ ವಾಂಛೆಯ ಹಿತ್ತಲು
ಕುರುಡು ಕಿವುಡು ಎಲ್ಲ ಇಹುದು
ರಸವ ನೆಕ್ಕುವುದು ಸುತ್ತಲು
ಸಿಕ್ಕ ಸಿಹಿ,ಕಾರ,ಹುಳಿಯ ಸವಿದು
ಕಹಿಯ ಬಲ್ಲ ನಾಲಿಗೆ.

೦೩.ಕವಿಗಳು
______________
ಇವರು ಎತ್ತು ,ಇವರು ಎಮ್ಮೆ
ರಥವ ಹಿಡಿದು ಎಳೆವರು
ನಾಡ ನುಡಿಯ ಹಿರಿಮೆ ಗರಿಮೆ
ಎಲ್ಲ ಮಹಿಮೆಯ ತಿಳಿವರು
ಲೆಕ್ಕವಿಲ್ಲದ ಪದ-ಪದ್ಯ-ಗದ್ಯರಚನೆ ಬಲ್ಲರು
ಉರಿಯ ನುಂಗಿ ತಂಪು ಹಿಂಗಿ
ಹಾಲು ಹಿತವ ಕೊಡುವರು
ಎದೆಗೆ ಹೊಕ್ಕ ಸಿಕ್ಕ ವಿಷವ
ಬಿಕ್ಕಿ ಬಿಕ್ಕಿ ಕಕ್ಕುವರು
ಓದು- ಬರಹ ಬಲ್ಲರವರು
ಖಡ್ಗ ಲೇಖನಿ ಹಿಡಿವರು
ಯಾರಿಗುಂಟು ಯಾರಿಗಿಲ್ಲ
ಅಕ್ಷರ ತೆನೆ ತುರುಕುವವರು
ಇವರೇ ನಮ್ಮ ಗಣಪ-ಬಳಪ
ಲಕ್ಷ್ಮಿ- ಸರ್ವಸ್ವ ನುಡಿವರು
ಮುಂಬರುವ ಪೀಳೆಗಗೆ ಎದೆಹಾಲು ನೀಡುವರು
ಇವರೇ ನಮ್ಮ ಕವಿಗಳು ನಾಡ ನುಡಿಯ ಕಲಿಗಳು.

೦೪. ರಾಜಕಾರಣಿಗಳು
________________________
ನಾಡನೊಡೆವ ಮಂದಿ ಇವರು
ನಮ್ಮ ನೆಲವ ಬಲ್ಲರು
ನಮ್ಮ ಮತವ ಗೆಲ್ಲುವನಕ
ಛಲದಿ ಬಿಡದೆ ಮೆರೆವರು
ನಲಿವ ನಮ್ಮ ನಾಡದೇವಿಯ
ಕೊರಳ ಹಾರವ ಕದಿವರು
ಒಲಿದ ನೆರಳಿನಲ್ಲಿ ಕಳುವು
ಇವರ ಕಾಯಕ ಎಂದಿಗೂ
ಅಂದಿಗಿಂದಿಗೆಲ್ಲ ಇವರೆ ಭಾರತವ ಆಳಿದವರು
ಕೆಳವರ್ಗದವರನೆಲ್ಲ ನೆತ್ತಿ ಹಿಂಡಿ ಬಿಡುವರು
ದಲಿತರಾದಿಯಾಗಿ ಇವರ ತುದಿಯನೆಲ್ಲ ಬಲ್ಲರು
ಕೊಟ್ಟುದೊಂದು ಪಡೆವರೈದು
ಬ್ರಷ್ಟಹಿತವ ಹೊಂದಿದವರು
ಇವರೆ ನಮ್ಮ ರಾಜ್ಯ ರಾಜರೆಂದು
ಉಲಿದು ಮೆರೆವರು ವೋಟು ನೋಟು
ಎಲ್ಲ ತಿಂದು ಜನರ ಹಿತವ ಮರೆತರು.

೦೫. ಗೋಪಾಲ
____________________
ಶ್ಯಾಮವರ್ಣ ಶ್ವೇತಹಾರ
ಗೋವುಗಳನು ಕಾಯ್ವನು
ಕೊಳಲನೂದಿ, ನಾದವಿಡಿದು
ಹಿಂಡು ದನವ ಕರೆವನು
ಗೋಪಿಕೆಯರ ಮನವ ಬಲ್ಲ
ಮಾತು ಬಲ್ಲ ಮಲ್ಲನು
ಕಂಸ ಕೊಂದ ಗಿರಿಯನೆತ್ತಿ
ಹಿಡಿದ ವೀರ ಧೀರನು.

// ಮೃದಂಗಜ//


ಸುರೇಶ ಜಕಾತಿ‌.ಜಮಖಂಡಿ
8746086658.

- ಸುರೇಶ ಜಕಾತಿ.ಜಮಖಂಡಿ

25 Jan 2020, 09:22 pm
Download App from Playstore: