ನಿನ್ನ ನೋಡಿದ ಕ್ಷಣವೂ ಕಾಡಿದೆ

ನಿನ್ನ ನೋಡಿದ ಕ್ಷಣವೂ ಕಾಡಿದೆ
ನನ್ನ ಹೃದಯವು ತನನ ಎಂದಿದೆ!!
ಕವನ ಬರೆಯುವ ಗೀಳು ಹತ್ತಿದೆ
ಮನದ ಪುಸ್ತಕ ತುಂಬಿ ಹೋಗಿದೆ!!

ಈ ಏಕಾಂಗಿಯ ಸಂಚಾರದಲಿ
ಜಾತ್ರೆಯ ಮೆರವಣಿಗೆ ದಿನ ಸಾಗಿದೆ!!
ಬಿಳಿ ಹಾಳೆಯ ಕಲ್ಪನೆಯಲಿ
ಬಣ್ಣದ ಚಿತ್ತಾರ ತಾ ಮೂಡಿದೆ!!

ಆ ಚಂದ್ರಮನ ಮರೆಮಾಡಲು
ಬಾನಿಗೆ ಚಪ್ಪರವ ಹಾಕಬೇಕಿದೆ!!
ಚುಕ್ಕಿ ತಾರೆಗೆ ಕೂಡಿ ಕಳೆಯುವ
ಲೆಕ್ಕಾಚಾರವ ಹೇಳಿ ಕೊಡಬೇಕಿದೆ!!

ನಾ ಸಾಗಲು ಹೆಜ್ಜೆ ಗುರುತದು
ಹಿಂದೆ ಬರುತ ಈಗೀಗ ಕೆಣಕುತ್ತಿದೆ!!
ಕಂಡು ಕಾಣದ ಹೊಸ ಲೋಕವು
ಕೈ ಬೀಸಿ ನನ್ನನ್ನು ಕರೆದಂತಿದೆ!!

- ಪಿ.ಜಿ.ಜ್ಯೋತಿ

29 Jan 2020, 10:48 am
Download App from Playstore: