ಕಲಿಗಾಲ

ಸಿಂಹದ ಮರಿಯ ತಂದು ಸಾಕಿ ಬೆಳಸಿದರೆ, ಅದಕೆ
ಆಕಳ ಗುಣ ಬಂದಿತೆ? ಅಮೃತದಂತ ಹಾಲು ಕೊಟ್ಟಿತೆ?
ನರಿಯ ಮರಿಯ ತಂದು ಸಾಕಿ ಬೆಳಸಿದರೆ ಅದಕೆ
ನಾಯಿಯಂತ ನಿಯತ್ತಿನ ಗುಣ ಬಂದಿತೆ?
ಕಳ್ಳಬೆಕ್ಕಿಗೆ ಮನೆಯಲ್ಲಿ ಜಾಗ ನೀಡಿ
ನಿಯತ್ತಿನ ನಾಯಿಗೆ ಅಂಗಳದಲ್ಲಿ ಜಾಗ ನೀಡಿದ
ಮನುಜನ ನೋಡಿ
ಇದು ಕಲಿಗಾಲವಯವ್ಯ
ಎಂದ ಗುರು ಬಸವ ಪ್ರಿಯ ರೇವಣಸಿದ್ದೇಶ್ವರ.

- Siddugouda

11 Feb 2020, 03:25 pm
Download App from Playstore: