ಅರಿತು ನಡೆ ನಿತ್ಯ...

ಕಲ್ಲು ಮುಳ್ಳಿನ ಹಾದಿ
ಬರಿಗಾಲ ಪಯಣ...
ಸುಡು ಬಿಸಿಲ ತಡೆಗೆ
ಮರವಿಲ್ಲ ನೆರಳಿಡಲು...

ಬರಗಾಲದ ಊರಲ್ಲಿ
ಹನಿ ನೀರ ಮಾತೆಲ್ಲಿ...
ಕಷ್ಟಕ್ಕಾಗದ ಬಂಧು
ಇದ್ದು ಸತ್ತಂತಿಹನಿಲ್ಲಿ...

ಒಂಟಿ ನೀನು ಒಂಟಿ
ಕೊನೆವರೆಗೂ ಇದೇ ಜಂಟಿ...
ಇರುವುದೊಂದೇ ಸತ್ಯ
ಇದ ನೀ ಅರಿತು ನಡೆ ನಿತ್ಯ...

- ಪಿ.ಜಿ.ಜ್ಯೋತಿ

12 Feb 2020, 11:01 am
Download App from Playstore: