ಕವಿಯು ಬರೆದ ಪ್ರೇಮಗೀತೆ

ಕವಿಯು ಬರೆದ ಪ್ರೇಮಗೀತೆಯ
ಸಾಲು ಕಠಿಣವೇ ಆಗಿದೆ!!
ಎದೆಯ ಕಡಲ ದಡದ ಮೇಲೆ
ಒಂಟಿ ಪಯಣ ಸಾಗಿದೆ!!

ಹರಿವ ನದಿಯ ಮೂಲ ಹುಡುಕಿ
ಧುಮುಕುವ ಆಸೆ ಮೂಡಿದೆ!!
ದಟ್ಟ ಕಾನನದ ನಟ್ಟ ನಡುವೆ
ಕುಳಿತು ಅಳಬೇಕು ಎಂದೆನಿಸಿದೆ!!

ನಲಿವ ಒಲಿಮೆಯ ಸಿರಿಯ ಕಂಡು
ಮನದಿ ಮರುಕವು ಹುಟ್ಟಿದೆ!!
ಯಾರಿಗೆ ಯಾರೂ ಇಲ್ಲ ಎನ್ನುವ
ಸತ್ಯವು ಸಂಭ್ರಮ ಪಡುತಿದೆ!!

- ಪಿ.ಜಿ.ಜ್ಯೋತಿ

16 Feb 2020, 12:15 pm
Download App from Playstore: