ಓ ಸಖಿ

ಓ ನನ್ನ ಸಖಿಯೆ ಆಗು ನೀ ಸತಿಯೆ
ಹೀಗೆ ನೀ ನನ್ನ ಸತಾಯಿಸುವುದು ಸರಿಯೆ.

ಕಪೋತ ಪಕ್ಷಿ ತಂದೈತೆ ನಿನಗಾಗಿ ಚಿಕ್ಕ ಸಂದೇಶ.
ಯುಗಯುಗಳ ಆದಿ ಆಗಮಿಸಿ ಬಂದು.
ಚೈತ್ರದ ಈ ಗಾಳಿ ತಂದೈತೆ ಒಲವು
ಮೋಡ ಕವಿದ ಗಗನ ನಯನ ನೀರ ಕಥನ
ನೀ ಅದಕೆ ಸಿಗದೆ ಹೋದೆ ಅದುವೆ ಅದಕೆ ಮಥನ..

ಅಂಬುಜನು ಬಂದ ಕೈಚಾಚಿ ಎಂದ
ನೀಡು ಅವಳನು ನನಗೆ, ತಗೋ ನೀ ಬ್ರಹ್ಮಾಂಡ
ಊರ ಕೆರೆ ಯಂಚಲ್ಲಿ ಬೆಳೆದ
ಆ ತಾವರೆ ನೀನಲ್ಲವೆ .
ನೀನಿಲ್ಲದೆ ನಾ ನಿಲ್ಲವೆ.

ಸಮುದ್ರ ಮಥನದ ಕಥೆಯಲ್ಲಿ ಬಂದ
ಶ್ರೀ ಹರಿ ಸತಿಯು ನೀನೆನಾ.
ಕಲಿಯುಗದ ಕೃಷ್ಣ ನಾ ನಿನಗೆ ಸಖಿಯೆ
ಕಲಿಯುಗ ರುಕ್ಮಿಣಿ ಆಗಲು ಏನು ಬಾಧೆ.

ಕಪೋತ ಪಕ್ಷಿ ತಂದೈತೆ ನಿನಗಾಗಿ ಚಿಕ್ಕ ಸಂದೇಶ.
ಯುಗಯುಗಳ ಆದಿ ಆಗಮಿಸಿ ಬಂದು.
ಚೈತ್ರದ ಈ ಗಾಳಿ ತಂದೈತೆ ಒಲವು

ಆ ಮನ್ಮಥನು ಸೋತಿಹನು ನಿನ್ನಲ್ಲಿ
ರತಿ ರಾಣಿ ಆಗಿರುವೆ ನೀ ನನ್ನಲ್ಲಿ.
ಗಂಡು ಹೆಣ್ಣು ಬರಗೆಟ್ಟಾಗ್ಲೇ ಮುದ್ದು ಮುದ್ದಾದ ಮಕ್ಕಳಾಗೋದು.
ಬಾರೆ ಬಾ ಬಾರೆ ನಕ್ಷತ್ರಗಳ ಮಹಿಷಿ.
ಇಳೆಗಿಳಿದು
ಈ ಭೂಮಿಯ ಪಾರಿಜಾತ ಹೂಗಳ ಮೇಲೆ
ಅಂದ್ವಾದ ಚಕ್ಕಚಂದ ಆಡೋಣ...

- Abhishek yogi

31 Mar 2020, 08:01 pm
Download App from Playstore: