ಕೃತಿಚೌರ್ಯ

ಕವಿಯೋರ್ವನ ಕಲೆಗೆ
ಅರಳಿದ ಕವಿತೆಗಳೆಲ್ಲ
ಭಾವನೆಯ ಸುವಾಸನೆಯನ್ನು
ಓದುಗರಿಗೆ ಪಸರಿಸುತ್ತಿತ್ತು,
ಕವಿಯಲ್ಲದವನ ಕಳ್ಳ
ಕೈಚಳಕದ ಮೋಡಿಗೆ ಬಲಿಯಾಗಿ
ಕದ್ದ ಕವಿತೆಗಳು ಉಳಿದದ್ದು
ಕೇವಲ ಕವಿತೆಯಾಗಿ
ಪ್ರಶಂಸೆಯ ಮಡಿಲೊಳಗೆ
ಬಿದ್ದು ಓಡಾಡಿ,ನರಳಾಡಿ,
ಕೊನೆಯುಸಿರೆಳೆದರೂ
ಕಡೆತನಕ ಅವನಿಂದ ಸಿಕ್ಕಿಲ್ಲ
ಕವಿ ಮತ್ತು ಕವಿತೆಗೊಂದು ಅರ್ಥ,

- ಅಕ್ಷತ

03 Apr 2020, 01:59 pm
Download App from Playstore: