ಅಜ್ಞಾತ
ಹರಡಿಹುದು ಎಲ್ಲೆಲ್ಲೂ ಮನುಕುಲದ ಮಾರಿ
ಹುಡುಕುತಿಹೆವು ನಾವಿಲ್ಲಿ ಬದುಕಿಗೊಂದು ದಾರಿ
ನರಳುತಿಹನು ನರನು ಉಳಿವಿಗಾಗಿ ಎಲ್ಲೆಲ್ಲೂ ಚೀರಿ
ಸಿಗಬಹುದೇ ಪರಿಹಾರ ಸಂಕಟವನೆಲ್ಲ ಮೀರಿ
ರುದ್ರತಾಂಡವದಿ ತಾ ನರ್ತಿಸುತಿಹುದು
ಮರಣಮೃದಂಗವನೇ ಬಾರಿಸುತಿಹುದು
ನರನ ಮುಂದೆ ರಣಕೇಕೆಯ ಹಾಕುತಿಹುದು
ಮಸಣಕೆಲ್ಲರನು ತಾ ಎಳೆದೊಯ್ಯುತಿಹುದು
ಚೀತ್ಕರಿಸಿ ಬೊಬ್ಬಿರಿದು ಹಲುಬಿದರೂ ಇಲ್ಲಿ
ಕೇಳುವಾ ದೈವ ಕಿವಿಗೊಡುತಿಲ್ಲ ಅಲ್ಲಿ
ತಾ ಮಾಡಿಹ ಪಾಪಗಳಿಗೆ ಪರಿಹಾರವೆಲ್ಲಿ
ಅಸಹಾಯಕದಿ ಕುಳಿತಿಹನು ನರನು ಕೈಚೆಲ್ಲಿ.
@ಕಂಪಾ
- KN PATIL
03 Apr 2020, 10:06 pm
Download App from Playstore: