ನನ್ನ ಅನಿಸಿಕೆ ನಿಮಗಾಗಿ

ಜೀವನದಲ್ಲಿ ಎರಡು ರೀತಿಯ ನೋವುಗಳಿರುತ್ತವೆ
ಒಂದು ನಿಮ್ಮನ್ನು ನೊಯಿಸಿದರೆ
ಇನ್ನೊಂದು ನಿಮ್ಮನ್ನ ಬದಲಾಯಿಸುತ್ತದೆ.

ಇನ್ನೊಬ್ಬರ ಬದುಕನ್ನು
ಇಣುಕಿ ನೋಡುವುದನ್ನು
ಬಿಟ್ಟಾಗಲೆ ನಿಮ್ಮ ಬದುಕು
ಸುಂದರವಾಗಿ ಕಾಣಲು ಸಾಧ್ಯ....

ಯಾವತ್ತೂ ನಿನಗೆ ಶತ್ರುಗಳ ಸಂಖ್ಯೆ
ಹೆಚ್ಚುತ್ತ ಹೋಗುತ್ತದೊ...
ಅವತ್ತು
ನಿ ನಡೆದ ಹಾದಿ ಮತ್ತು ನಿನ್ನ
ಗುರಿ ನಿಖರವಾಗಿದೆ ಎಂದರ್ಥ....

ಪ್ರಯತ್ನ ಎಂಬುದು ಬೀಜದ ಹಾಗೆ
ಬಿತ್ತುತ್ತಲೇ ಇರಿ
ಚಿಗುರಿದರೆ ಮರವಾಗಲಿ
ಇಲ್ಲವೆಂದರೆ
ಮಣ್ಣಿಗೆ ಗೊಬ್ಬರವಾಗಲಿ.....

ಡಿ ಜೆ ವಿಶಾಲ ❤❤

- Vishal Hiremath

06 Apr 2020, 12:28 pm
Download App from Playstore: